ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಧರ್ಮಸ್ಥಳ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಿಂದ ಚಿಕಿತ್ಸಾ ಸಹಾಯಧನ ಹಸ್ತಾಂತರ

0

ಬೆಳ್ತಂಗಡಿ: ಕಳೆದ ತಿಂಗಳು ಧರ್ಮಸ್ಥಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯಜ್ಞೇಶ್ ಇವರು ತನ್ನ ಎರಡು ಕಾಲುಗಳ ಮುರಿತಕ್ಕೆ ಒಳಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗಾಗಲೇ ಎರಡು ಸರ್ಜರಿ ನಡೆದಿದ್ದು 4 ಲಕ್ಷಕ್ಕೂ ಹೆಚ್ಚು ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ ಇನ್ನಷ್ಟು ಹಣದ ಅವಶ್ಯಕತೆ ಇದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿರುತ್ತಾರೆ.

ಆರ್ಥಿಕ ಸಮಸ್ಯೆ ಇರುವ ಇವರಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಧರ್ಮಸ್ಥಳ ಗ್ರಾಮ ಸಮಿತಿಯ ಸದಸ್ಯರು ಸೇರಿ ಧರ್ಮಸ್ಥಳ ಗ್ರಾಮದ ಬಿಲ್ಲವ ಬಂಧುಗಳಿಂದ ಸಂಗ್ರಹಿಸಿದ ಒಟ್ಟು 41,500 ರೂಪಾಯಿಯನ್ನು ಇಂದು ಯಜ್ಞೇಶ್ ರವರ ತಾಯಿ ಹೇಮಾವತಿ ಇವರಿಗೆ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಇದರ ಅಧ್ಯಕ್ಷ ಜಯವಿಕ್ರಮ್ ಇವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಸುನಿಲ್ ಕನ್ಯಾಡಿ, ರೂಪೇಶ್ ಧರ್ಮಸ್ಥಳ, ಮಾಜಿ ನಿರ್ದೇಶಕ ಪುರುಷೋತ್ತಮ್ ಪೂಜಾರಿ, ಧರ್ಮಸ್ಥಳ ಬಿಲ್ಲವ ಗ್ರಾಮ ಸಮಿತಿ ಇದರ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಯಶೋಧರ ಪೂಜಾರಿ, ಉಪಾಧ್ಯಕ್ಷ ಶ್ರೀಧರ್ ಪೂಜಾರಿ, ಆನಂದ ಜೋಡುಸ್ಥಾನ ಹಾಗೂ ಸೀನ ಪೂಜಾರಿ ನಡುಗುಡ್ಡೆ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here