ಉಜಿರೆ ಶ್ರೀ ಧ.ಮ.ಅ.ಸೆಕಂಡರಿ ಶಾಲೆಯಲ್ಲಿ ಯೋಗ ದಿನಾಚರಣೆ

0

ಉಜಿರೆ: ಶ್ರೀ ಧ.ಮಂ.ಅನುದಾನಿತ ಸೆಕೆಂಡರಿ ಶಾಲೆ ಉಜಿರೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ವ್ಯವಸ್ಥಾಪನ ನಿರ್ದೇಶಕ ಜನಾರ್ದನ್ ರವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯಾವುದೇ ರೋಗಕ್ಕು ಯೋಗದಿಂದ ಪರಿಹಾರ ಸಿಗುತ್ತದೆ ಎಂದರು.ಇನ್ನೋರ್ವ ಅತಿಥಿಗಳಾದ ಶ್ರೀ ಧ.ಮಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್ ಅವರು ಏಕಾಗ್ರತೆಯ ಮೂಲವೇ ಯೋಗ ಎಂದರು.ತರಬೇತಿ ನೀಡಿದ ವಿದ್ಯಾರ್ಥಿಗಳಾದ ಶ್ರೇಯಾ, ಆಶ್ವಿತಾ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಸುರೇಶ್ ಸ್ವಾಗತಿಸಿದರು.ಪರಮೇಶ್ವರ್ ವಂದಿಸಿದರು.ರಾಧಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here