ಬೆಳಾಲು: ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ವಿಶ್ವನಾಥ್ ಗೌಡ ಪುಚ್ಚೆಹಿತ್ತಿಲು ಚಿಕಿತ್ಸೆ ಫಲಕಾರಿಯಾಗದೆ ನಿಧನ

0

ಬೆಳಾಲು: ಗ್ರಾಮದ ಮಾಯ ಪುಚ್ಚೆಹಿತ್ಲು ನಿವಾಸಿ ವೃತ್ತಿಪರ ಆಟೋ ಚಾಲಕರಾಗಿದ್ದ ವಿಶ್ವನಾಥ್ ಗೌಡ(42 ವ) ಪುಚ್ಚೆಹಿತ್ತಿಲು ಅವರು ಜೂ.12ರಂದು ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಇಂದು(ಜೂ.17ರಂದು) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ದಮಯಂತಿ, ಮಕ್ಕಳಾದ ಅಭಿಜ್ಞಾ, ಅಭಯ್ ಹಾಗೂ ತಂದೆ ಲೋಕಯ್ಯ ಗೌಡ, ತಾಯಿ ಲೋಕಮ್ಮ, ಸಹೋದರ ಶ್ರೀನಿವಾಸ ಗೌಡ, ಸಹೋದರಿಯರಾದ ಜಾನಕಿ, ಸುರೇಖಾ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here