ಬಳ್ಳಮಂಜ: ಶ್ರೀ ಕ್ಷೇ.ಧ.ಗ್ರಾ.ಯೋ. ಹಾಗೂ ಪ್ರ.ಬಂ. ಸ್ವಸಹಾಯ ಸಂಘ ಒಕ್ಕೂಟದ ಪದಗ್ರಹಣ ಹಾಗು 38ನೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಉದ್ಘಾಟನೆ

0

ಬಳ್ಳಮಂಜ: ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನ ಸಮಾಜದ ಮುಖ್ಯ ವಾಹಿನಿಗೆ ತರುವುದೇ ಡಾ.ಡಿ.ವೀರೇಂದ್ರ ಹೆಗ್ಗಡೆ ಯರವರ ಆಶಯ, ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ ಅಭಿಮತ ಹುಟ್ಟಿನಿಂದ ಸಾವಿನವರೆಗೆ ಬರುವ ಸಾಕಷ್ಟು ಸಂಕಷ್ಟಗಳಿಗೆ ಸಹಕಾರ ನೀಡುವುದು, ಗ್ರಾಮಿಣ ಭಾಗದಲ್ಲಿರುವ ಸಮಸ್ಯೆಗಳನ್ನ ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಮೂಲಭತ ಸೌಕರ್ಯಗಳಿಗೆ ಅನುದಾಗಳನ್ನ ಒದಗಿಸಿ ಅಭಿವೃದ್ದಿ ಮಾಡುವುದೂ ಯೋಜನೆಯ ಆಶಯ 42 ವರ್ಷಗಳ ಹಿಂದೆ ತಾಲೂಕಿನಲ್ಲಿ ಇದ್ದ ಕಡು ಬಡತನವನ್ನ ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು.

1982ರಲ್ಲಿ ಗ್ರಾಮಾಭಿವೃದ್ದಿ ಯೋಜನೆಯನ್ನೂ ಜಾರಿಗೆ ತಂದರು ಇದರ ಮುಖ್ಯ ಉದ್ದೇಶ ಸಾಲ ನೀಡುವುದು ಅಲ್ಲ ಬದಲಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬುವುದೇ ಆಗಿದೆ ಎಂದರು 42 ಹಿಂದೆ ಅನುಭವಿಸಿದ ಕಷ್ಟದ ದಿನಗಳು ಎಲ್ಲರಿಗೂ ನೆನಪಿದೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಊಟಕ್ಕೆ ಅಕ್ಕಿ, ಪಾತ್ರೆ, ಅಡಿಕೆ, ತೆಂಗಿನ ಗಿಡಗಳನ್ನ ನೀಡಿ ಜನರ ಪರಿವರ್ತನೆಯನ್ನ ಮಾಡುವ ಕೆಲಸವನ್ನು ಯೋಜನೆಯು ಮಾಡುತ್ತಾ ಬಂದಿದೆ ಕೃಷಿ ಅಭಿವೃದ್ಧಿಯ ಹಾಗು ಮೂಲಬೂತ ಸೌಕರ್ಯಗಳಿಗೆ ಕ್ಷೇತ್ರದಿಂದ ಅನುದಾನಗಳನ್ನ ಒದಗಿಸುವ ಮೂಲಕ ಬಡವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯನ್ನ ತರಲಾಯಿತು.ಬದಲಾದ ಕಾಲಘಟ್ಟದಲ್ಲಿ ಗುಂಪಿನ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ಆರ್ಥಿಕ ಚೈತನ್ಯ ನೀಡುವ ಕೆಲಸವನ್ನು ಯೋಜನೆಯು ಮಾಡುತ್ತಿದೆ.

ಬ್ಯಾಂಕ್ ಹಾಗು ಸದಸ್ಯರ ಮದ್ಯದಲ್ಲಿ ಯೋಜನೆಯೂ ಕೊಂಡಿಯಾಗಿ ಮಾತ್ರಾ ಕೆಲಸವನ್ನ ಮಾಡುತ್ತಿದೆ ಹಾಗಾಗೀ ಗುಂಪಿನ ಸದಸ್ಯರು ತಪ್ಪು ಸಂದೇಶಗಳಿಗೆ ಕಿವಿ ಕೊಡದೇ ಗುಂಪಿನ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.ಗುಂಪಿನ ಜೀವ ವಾರದ ಸಭೆ ಗುಂಪಿನ ವಾರದ ಸಭೆಗಳನ್ನ ಸಮರ್ಪಕವಾಗಿ ಮಾಡಬೇಕು ಎಂದರು.ಬ್ಯಾಂಕಿನಲ್ಲಿ ಓರ್ವ ಸದಸ್ಯರು ಸಾಲ ಪಡೆಯಬೇಕಾದರೆ ಕನಿಷ್ಟ 17 ದಾಖಲಾತಿಗಳನ್ನು ನೀಡಬೇಕು ಇದನ್ನು ಒದಗಿಸುವುದು ಹೆಚ್ಚಿನ ಸದಸ್ಯರಿಗೆ ಕೆಲ ತಾಂತ್ರಿಕ ಸಮಸ್ಯೆಗಳಿಂದ ಅಡಚಣೆ ಅಗುತ್ತದೆ ಆದರೆ ಗುಂಪಿನ ಮೂಲಕ ಗುಂಪು ಭದ್ರತೆಯ ಅದರದಲ್ಲಿ ಸುಲಭ ರೂಪದಲ್ಲಿ ಪ್ರಗತಿ ನಿಧಿ ಪಡೆಯುವ ಮೂಲಕ ಸದಸ್ಯರು ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಕಣ್ಣಾಗಿ ಕಾರ್ಯನಿರ್ವಹಿಸಬೇಕು ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಸಿಕ್ಕಿರುವ ಅವಕಾಶವ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಿಕ್ಕ ಅವಕಾಶ ಎಂಬ ಭಕ್ತಿಯಿಂದ ಜನರ ಸೇವೆ ಮಾಡಬೇಕು ನೊಣ ರೋಗವನ್ನು ಹರಡುತ್ತದೆ ಜೇನು ನೊಣ ಮಕರಂದವನ್ನ ಹಂಚುತ್ತದೆ ಒಕ್ಕೂಟದ ಪದಾಧಿಕಾರಿಗಳು ಜೇನು ನೊಣ ಮಕರಂದವನ್ನು ಹಂಚಿದಂತೆ ಗುಂಪಿನ ಸದಸ್ಯರ ಸಮಸ್ಯಗಳಿಗೆ ಸ್ಪಂದಿಸಬೇಕು ಎಂದು ವಿವರಿಸಿದರು.

ನಮ್ಮ ಸಮಾಜಕ್ಕೆ ಹೃದಯ ಶ್ರೀಮಂತಿಕೆ ಹೊಂದಿರುವ ಜನರ ಅಗತ್ಯತೆ ಇದೆ ಅಂತಹ ಹೃದಯ ಶ್ರೀಮಂತಿಕೆ ಹೊಂದಿರುವ ಸದಸ್ಯರು ಮಚ್ಚಿನ, ಪಾಲಡ್ಕ, ಕುತ್ತಿನ, ಕುದ್ರಡ್ಕ ಒಕ್ಕೂಟದ ಸರ್ವ ಸದಸ್ಯರು ಎಂದು ಭಾಗವಹಿಸಿದ್ದ ಸದಸ್ಯರನ್ನ ಕೊಂಡಾಡಿದರು.ಸತ್ಯ ನಾರಾಯಣ ಪೂಜೆ ಮಾಡುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಸಾರ್ವಜನಿಕ ಪೂಜೆ ಮಾಡುವ ಮೂಲಕ ಇಡೀ ಗ್ರಾಮಕ್ಕೆ ಪುಣ್ಯ ಪ್ರಾಪ್ತಿಯಾಗಲಿದೆ ಶ್ರೀ ಸತ್ಯ ನಾರಾಯಣ ವೃತವನ್ನು ಭಕ್ತಿ ಪೂರ್ವಕವಾಗಿ ವಿವಿಧ ಪತ್ರ, ಪುಷ್ಪ, ದೂಪ, ದೀಪದಿಗಳಿಂದ ಪೂಜಿಸಲು ಪಡುವುದರಿಂದ ಸಕಲ ಪಾಪ ಪರಿಹಾರವಾಗುವುದು ಈ ವ್ರತವನ್ನು ಯಾವುದೇ ಕಟ್ಟು ಕಟ್ಟಳೆಯಾಗಲಿ ಅಥವಾ ಇಂತಹ ದಿನವೇ ಮಾಡಬೇಕೆಂಬ ನಿರ್ಬಂಧವಿಲ್ಲಾ, ನಿರ್ಮಲ ಮನಸ್ಸಿನಿಂದ ಸರ್ವರೂ ಪೂಜಿಸಬಹುದಾಗಿದೆ.

ವೃತಾಚರಣೆ, ಅನುಷ್ಟಾನ, ಒಳ್ಳೆಯ ನಡತೆ, ಸಂಪ್ರದಾಯ, ಪದ್ಧತಿ, ವಾಡಿಕೆ , ಕ್ರಮ ನಿಯಮ ಇವುಗಳೆಲ್ಲ ಧರ್ಮಾಚರಣೆ ಗಳೂ ಇವುಗಳನ್ನು ಅಳವಡಿಸಿಕೊಂಡು ಎಲ್ಲರೂ ಆಚರಿಸುತ್ತಾ ಬಂದಾಗ ಆದಕ್ಕೆ ಧರ್ಮದ ಸ್ವರೂಪ ಬರುತ್ತದೆ ಆಚಾರಡಿಂದ ಧರ್ಮದ ಉತ್ಪತ್ತಿ ಆಚಾರ, ಆಯುಷ್ಯವು ವೃದ್ಧಿಸುತ್ತದೆ ಎಂದು ಅವರು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಮಡಂತ್ಯಾರು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮಚ್ಚಿನ, ಪಾಲಡ್ಕ, ಕುದ್ರಡ್ಕ, ಕುತ್ತಿನ ಒಕ್ಕೂಟಗಳ ಪದಗ್ರಹಣ ಹಾಗು 38ನೇ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಕಳುಹಿಸಿ ಕೊಡಲಾದ ಶುಭ ಸಂದೇಶವನ್ನು ಗೀತಾ ಲತಾ ಓದಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರ ಹರ್ಷ ಸಂಪಿಗೆತ್ತಾಯ ಸತ್ಯ ನಾರಾಯಣ ಪೂಜೆಯ ಫಲ ಎಲ್ಲರಿಗೂ ದೊರಕಲಿ, ನೂತನವಾಗಿ ರಚನೆಗೊಂಡ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಉಪ ಕೃಷಿ ನಿರ್ದೇಶಕ ವಿಶ್ವನಾಥ ಬಂಗೇರಾ, ಜನ ಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲ ಕೊಲಾಜೆ, ಜೆಸಿಐ ಅಧ್ಯಕ್ಷ ವಿಕೇಶ್ ಮಾನ್ಯ, ದೈವ ಆರಾಧಕ ಸದಾನಂದ ಪೂಜಾರಿ, ಪ್ರಗತಿ ಪರ ಕೃಷಿಕ ಕಾಂತಪ್ಪ ಗೌಡ ನಿಡ್ಡಜೆ ಭಾಗವಹಿಸಿದ್ದರು.

ಸಬಾ ಅಧ್ಯಕ್ಷತೆಯನ್ನು 38ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಹರ್ಷ ಬಳ್ಳಮಂಜ ವಹಿಸಿ ಮಾತನಾಡುತ್ತ ಸರ್ವರ ಸಹಕಾರದಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಮಚ್ಚಿನ ನಿಕಟ ಪೂರ್ವ ಅಧ್ಯಕ್ಷ ಹರೀಶ್ ಸುವರ್ಣ, ನಾರಾಯಣ ಗೌಡ ಪಾಲಡ್ಕ, ಸುರೇಶ್ ಕುದ್ರಡ್ಕ ಹಾಗು ನೂತನ ಮಚ್ಚಿನ ಒಕ್ಕೂಟದ ಅಧ್ಯಕ್ಷೆ ಸುಧಾ, ಜಯ ಪೂಜಾರಿ ಕುತ್ತಿನ, ಕುಸುಮಾವತಿ ಪಾಲಡ್ಕ, ವಿಜಯ ಮಡೆಕ್ಕಿಲ್ಲ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ವಲಯ ಅಧ್ಯಕ್ಷ ಸತೀಶ್ ಆಚಾರ್ಯ ಹಾಜರಿದ್ದರು.

ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ, ಸ್ವಾಗತಿಸಿದರು. ವಲಯ ಮೇಲ್ವಿಚಾರಕ ವಸಂತ ನಿರೂಪಿಸಿದರು.ಅಂಗನವಾಡಿ ಶಿಕ್ಷಕಿ ಕುಮಾರಿ ಪುಷ್ಪಾವತಿ ಧನ್ಯವಾದವಿತ್ತರು. ಮಚ್ಚಿನ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಪರಮೇಶ್ವರ್, ಕುದ್ರಡ್ಕ ಸೇವಾ ಪ್ರತಿನಿಧಿ ನಂದಿನಿ ಸಹಕರಿಸಿದರು.70 ವರ್ಷ ದಾಟಿದ ಹಿರಿಯ ಹಾಗು ಪಾನಮುಕ್ತ ಸದಸ್ಯರನ್ನ ಗೌರವಿಸಲಾಯಿತು.

LEAVE A REPLY

Please enter your comment!
Please enter your name here