ಧರ್ಮಸ್ಥಳ ಮುಳಿಕಾರಿನಲ್ಲಿ‌ ಮನೆಗೆ ಮರ‌ ಬಿದ್ದು ಹಾನಿ

0

ಬೆಳ್ತಂಗಡಿ: ತಾಲೂಕಿನಲ್ಲಿ ಸೋಮವಾರ ಜೂನ್ 10ರಂದು ಸಂಜೆಯ ವೇಳೆ ಭಾರೀ ಮಳೆ ಸುರಿದಿದ್ದು ಮಳೆಯೊಂದಿಗೆ ಬೀಸಿದ ಭಾರ ಗಾಳಿಗೆ ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ವ್ಯಾಪಕ ಹಾನಿ ಸಂಭವಿಸಿದೆ‌.ಇಲ್ಲಿನ ನಿವಾಸಿ ಪೆರ್ನ ಮಲೆಕುಡಿಯ ಎಂಬವರ ತೋಟದಲ್ಲಿ ಸುಮಾರು‌ 50ಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದಿದೆ.

ಮನೆಯ ಸಮೀಪದಲ್ಲಿದ್ದ ದೊಡ್ಡ ಗಾತ್ರದ ಮರಗಳು ಮುರಿದು ಬಿದ್ದಿದೆ. ಮನೆಯ ಹಂಚು ಗಾಳಿಗೆ ಹಾರಿಹೋಗಿದೆ ವ್ಯಾಪಕವಾದ ಹಾನಿ ಸಂಭವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ತಾತ್ಕಾಲಿಕವಾಗಿ ಮನೆಯನ್ನು ದುರಸ್ತಿ ಮಾಡಲಾಗಿದೆ.ಭಾರೀ ಗಾತ್ರದ ಮರಗಳು ವಿದ್ಯುತ್ ಲೈನಿನ ಮೇಲೆ ಮುರಿದು ಬಿದ್ದಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ಇಲ್ಲಿಯೇ ಸಮೀಪದ ಶಂಕರ ಎಂಬವರ ಮನೆಗೆ ಹಾಗೂ ತೋಟಕ್ಕೂ ಹಾನಿಯಾಗಿದೆ. ಈ ಪ್ರದೇಶದಲ್ಲಿ ಭಾರೀ ಗಾಳಿಯಿಂದಾಗಿ ಇನ್ನೂ ಹಲವರ ತೋಟಗಳಲ್ಲಿ ಹಾನಿಯಾಗಿರುವುದಾಗಿ ತಿಳಿದು ಬಂದಿದೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

LEAVE A REPLY

Please enter your comment!
Please enter your name here