ಆಭರಣ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಕೊಡುಗೆ

0

ಬೆಳ್ತಂಗಡಿ: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಆಭರಣ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಸಲುವಾಗಿ ಗ್ರಾಹಕರಿಗೆ ಅಕ್ಷಯ ತೃತೀಯ ವಿಶೇಷ ಆಫರ್‌ಗಳನ್ನು ನೀಡಿದ್ದು, ತಮ್ಮ ಇಷ್ಟದ ಚಿನ್ನಾಭರಣಗಳ ಖರೀದಿಗೆ ವಿಫುಲ ಅವಕಾಶವಿದೆ.

ಅಕ್ಷಯ ತೃತೀಯ ಖರೀದಿಯನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಮೇ 10 (ಅಕ್ಷಯ ತೃತೀಯದಂದು) ಆಕರ್ಷಕ ಕೊಡುಗೆಗಳೊಂದಿಗೆ ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ.

ಬುಕ್ಕಿಂಗ್ ಮಾಡಿದ ದಿನದ ಚಿನ್ನದ ದರ ಅಥವಾ ಮೇ 10ರಂದು ಚಿನ್ನದ ದರ ಯಾವುದು ಕಡಿಮೆಯೋ ಆ ದರದಲ್ಲಿ ಆಭರಣಗಳನ್ನು ಖರೀದಿಸಬಹುದಾಗಿದೆ.ಅಲ್ಲದೇ ಎಲ್ಲಾ ತೂಕದ ಚಿನ್ನದ ನಾಣ್ಯಗಳು ಲಭ್ಯವಿದೆ.

ಆಭರಣ ಜ್ಯುವೆಲ್ಲರ್ಸ್ ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಕರ್ನಾಟಕದ 15 ನಗರಗಳಲ್ಲಿ ಮತ್ತು ಗೋವಾದ ಪಣಜಿಯಲ್ಲಿ ಸೇರಿದಂತೆ ಒಟ್ಟು 18 ಮಳಿಗೆಗಳನ್ನು ಹೊಂದಿದೆ.

ಆಭರಣವು 88 ವರ್ಷಗಳ ಶ್ರೀಮಂತ, ವಿಶ್ವಾಸಾರ್ಹತೆಯ ಪರಂಪರೆಯನ್ನು ಹೊಂದಿದ್ದು, ನೈಜ ಬೆಲೆಯ ಭರವಸೆ, ನೈತಿಕ ವ್ಯವಹಾರ ಕ್ರಮಗಳು, ಅತ್ಯುನ್ನತ ಕೌಶಲ ಹಾಗೂ ಶ್ರೇಷ್ಠ ಗುಣ ಮಟ್ಟದ ಭರವಸೆಯ ನಾಲ್ಕು ಸ್ತಂಭಗಳ ಮೇಲೆ ನಿರ್ಮಿಸಲ್ಪಟ್ಟಿರುತ್ತದೆ.

ಅಕ್ಷಯ ತೃತೀಯದ ಇಷ್ಟೆಲ್ಲ ಕೊಡುಗೆಗಳನ್ನು ಸದುಪಯೋಗಿಸಿಕೊಂಡು ಆಭರಣದ ವ್ಯಾಪಕ ಸಂಗ್ರಹದಲ್ಲಿರುವ ಅಪೂರ್ವ ಕುಸುರಿ ಕೆತ್ತನೆಯ ಉತ್ಕೃಷ್ಟ ಗುಣಮಟ್ಟದ, ಆಶ್ಚರ್ಯಕರ ವಿನ್ಯಾಸಗಳ ಆಭರಣಗಳನ್ನು ಖರೀದಿಸುವುದಕ್ಕೆ ಗ್ರಾಹಕರಿಗೆ ಇದು ಸದಾವಕಾಶವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here