ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

0

ಬೆಳ್ತಂಗಡಿ: ಕೊಕ್ಕಡ ವಲಯದ ಮಲ್ಲಿಗೆ ಮಜಲು ಎಂಬಲ್ಲಿನ ಬಿ.ಫಾತುಮರವರು ಅನಾರೋಗ್ಯದಿಂದ ಬಳಲುತಿದ್ದು, ನಡೆದಾಡಲು ಶಕ್ತಿ ಇಲ್ಲದಿರುವ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ವೀಲ್ ಚೇರ್ ನ್ನು ಒಕ್ಕೂಟ ಹಾಗೂ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಊರ ಗಣ್ಯರು ವಿತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜನಜಾಗ್ರತಿ ವೇದಿಕೆ ಸದಸ್ಯರಾದ ಉಸ್ಮಾನ್, ಸೇಸಪ್ಪ ಮೂಲ್ಯ, ಸೌತಡ್ಕ ಒಕ್ಕೂಟದ ಅಧ್ಯಕ್ಷರು ಅಬ್ದುಲ್ ರಜಾಕ್, ಸೌತಡ್ಕ ಒಕ್ಕೂಟದ ಮಾಜಿ ಅಧ್ಯಕ್ಷರಾದ ಮೊಹಮ್ಮದ್ ರಫೀಕ್, ಕೊಕ್ಕಡ ಒಕ್ಕೂಟದ ಉಪಾಧ್ಯಕ್ಷ ತೋಮಸ್, ಮೇಲ್ವಿಚಾರಕ ಭಾಗೀರಥಿ, ಸೇವಾಪ್ರತಿನಿಧಿ ಅನಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here