ಶೃಂಗೇರಿ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಕ್ಕೆ ಭೇಟಿ- ಶ್ರೀ ಚಂದ್ರ ಮೌಳೀಶ್ವರ ಪೂಜೆ, ಪಾದ ಪೂಜೆ, ಆಶೀರ್ವಚನ

0

ಬೆಳ್ತಂಗಡಿ: ಶ್ರೀಮತ್ ಪರಮಹಂಸ ಪರಿವ್ರಜಕಾಚಾರ್ಯವ ರ್ಯೆತ್ಯಾದನೇಕ ಬಿರುದಾವಲೀ ಸಮಲಂಕೃತರಾದ ದಕ್ಷಿಣಾಮ್ನಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾ ಸ್ವಾಮಿಗಳ ಪರಮಾನುಗ್ರಹಪುರಸ್ಸರ ಆಶೀರ್ವಾದಗಳಿಂದ ತತ್ಕರ ಕಮಲ ಸಂಜಾತರಾದ ಶ್ರೀ ಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರು ಎ.29ರಂದು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಕ್ಕೆ ದಯಮಾಡಿ ಶ್ರೀ ಚಂದ್ರಮೌಳೀಶ್ವರ ಪೂಜಾಧಿಗಳನ್ನು ನೇರವೇರಿಸಿ ಆಶೀರ್ವದಿಸಿದರು.

ಬಳಿಕ ಪಾದ ಪೂಜೆ ಸೇವೆಗಳು ನಡೆಯಿತು.

ಶೃಂಗೇರಿ ಕ್ಷೇತ್ರದ ಗುರು ಸೇವಾ ನಿರತ, ಆಡಳಿತಾಧಿಕಾರಿ ಮುರಳಿ, ಶೃಂಗೇರಿ ಉಡುಪಿ ಮಠದ ವಾಗೇಶ್ ಶಾಸ್ತ್ರಿ, ಕೋಟೆಕಾರ್ ಮಠದ ಸತ್ಯಶಂಕರ ಬಲ್ಲಾವ, ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಶಿವಾನಂದ ರಾವ್, ಕಾರ್ಯದರ್ಶಿ ವಿಕಾಸ್ ರಾವ್, ಸಮಿತಿ ಸದಸ್ಯರು, ಮಹಿಳಾ ಸಮಿತಿ, ಯುವ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಮಾಜಿ ಅಧ್ಯಕ್ಷ ಹಿರಿಯ ವಕೀಲ ಬಿ.ಕೆ.ಧನಂಜಯ ರಾವ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here