ಓಡಲ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ನೇಮೋತ್ಸವ

0

ಉಜಿರೆ: ಉಜಿರೆ ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನಲ್ಲಿ ಬ್ರಹ್ಮಶ್ರೀ ಉಚ್ಚೆಲತ್ತಾಯ ನೀಲೇಶ್ವರ ಪದ್ಮನಾಭಾ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪಿ.ರಾಜಗೋಪಾಲ ಯಡಪಡಿತ್ತಾಯ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಎ.29ರಂದು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೆಳಿಗ್ಗೆ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ, ಕಲಶಾಭಿಷೇಕ, ಚಂಡಿಕಾ ಯಾಗ ಪೂರ್ಣವತಿ ಮಧ್ಯಾಹ್ನ ಪರ್ವ, ಮಹಾ ಪೂಜೆ ನಡೆಯಿತು. ಸಂಜೆ ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ, ರಾತ್ರಿ 7.30ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ, ಬಳಿಕ ಭಂಡಾರ ತೆಗೆದು ದೈವಕ್ಕೆ ಎಣ್ಣೆ ಬೂಳ್ಯ, ರಾತ್ರಿ 8.30ರಿಂದ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿದ್ಯ ರಾತ್ರಿ 10 ರಿಂದ ಶ್ರೀ ವ್ಯಾಘ್ರಚಾಮುಂಡಿ ನೇಮೋತ್ಸವ ನಡೆಯಿತು.

ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ಪರಮೇಶ್ವರ,ಉಪಾಧ್ಯಕ್ಷ ಹರೀಶ್ ಕಾವ, ಕೋಶಾಧಿಕಾರಿ ಸುರೇಶ್ ಆಚಾರ್, ಟ್ರಷ್ಟಿಗಳಾದ ಶ್ರೀನಿವಾಸ್ ಗೌಡ ಮಧುರ, ವಿನಯಚಂದ್ರ ಬೆಳಕು, ವಿದ್ಯಾ ಕುಮಾರ್ ಕಾಂಚೋಡು, ಸುರೇಶ್ ಕೂಡಿಗೆ, ಚಿತ್ರೀಶ್ ಶೆಟ್ಟಿ, ಅಣ್ಣಿ ಗೌಡ ಮೇಂದ್ರೆಲ್, ವಿಶಾಲಾಕ್ಷಿ ರಾಮಣ್ಣ ನಾಯ್ಕ, ಖಾಯಂ ಆಹ್ವಾನಿತರಾದ ಪದ್ದಣ್ಣ ಗೌಡ, ಪುಷ್ಪಾ ಶ್ರೀನಿವಾಸ್ ಗೌಡ, ಪ್ರತಿಷ್ಠಾ ವರ್ದಂತ್ಯುತ್ಸವ ಸಮಿತಿ ಸದಸ್ಯರು, ಊರವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here