ನಿಡ್ಲೆ ಗ್ರಾಮದ ಪ್ರಮುಖ ಬಿಜೆಪಿ ಮುಖಂಡ ಕಜೆ ಅಜಿತ್ ಗೌಡ ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0

ನಿಡ್ಲೆ: ನಿಡ್ಲೆ ಗ್ರಾಮದ ಪ್ರಮುಖ ಬಿಜೆಪಿ ಮುಖಂಡರಾದ ಕಜೆ ವಸಂತ ಗೌಡ ರ ಮಗ ಅಜಿತ್ ಗೌಡ ಇವರು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ ಇವರ ಸಮ್ಮುಖದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ರಜತ್ ಗೌಡ ಉಜಿರೆ, ಕಳೆಂಜ ತಾಲೂಕು ಪಂಚಾಯತ್ ಉಸ್ತುವಾರಿ ತುಕಾರಾಂ ಗೌಡ, ರೆಖ್ಯಾ ಮಹಿಳಾ ಕಾಂಗ್ರೆಸ್ ಮುಖಂಡರಾದ ವಿಜಯಲಕ್ಷ್ಮಿ, ಮುಹಮ್ಮದ್ ಕಲಂದರ್ ಕೊಕ್ಕಡ, ನಿಡ್ಲೆ ಬೂತ್ ಸಮಿತಿ ಅಧ್ಯಕ್ಷರಾದ ಶಿವರಾಜ್ ರೈ, ಬೂತ್ ಏಜಂಟ್ ಮಾಧವ ಗೌಡ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here