ಧರ್ಮಸ್ಥಳ: ನೀರಚಿಲುಮೆ ಪುಡ್ಕೆತ್ತು ಬಳಿ ಮೀನಿನ ಟೆಂಪೋ-ಓಮ್ನಿ ನಡುವೆ ಅಪಘಾತ: ಓಮ್ನಿ ಚಾಲಕನಿಗೆ ಗಾಯ

0

ಧರ್ಮಸ್ಥಳ: ಇಲ್ಲಿನ ನೀರಚಿಲುಮೆಯ ಪುಡ್ಕೆತ್ತು‌ ಬಳಿ ಮಲ್ಪೆಯಿಂದ ಚೆನ್ನೈಗೆ ತೆರಳುತ್ತಿದ್ದ ಮೀನಿನ ಲಾರಿ ಮತ್ತು ಕನ್ಯಾಡಿಯ ಕೃಷಿಕರೊಬ್ಬರಿಗೆ ಸೇರಿದ ಎನ್ನಲಾದ ಓಮ್ನಿ ಪರಸ್ಪರ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಲಾರಿ ಪಕ್ಕದ ಚರಂಡಿಗೆ ಇಳಿದಿದ್ದು, ಓಮ್ನಿಯು ನಜ್ಜುಗುಜ್ಜಾಗಿದೆ.

ಓಮ್ನಿಯಲ್ಲಿದ್ದ ಚಾಲಕನಿಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

LEAVE A REPLY

Please enter your comment!
Please enter your name here