ಪಟ್ರಮೆ ದೇವಳದಲ್ಲಿ ಬಿಸು ಪರ್ಬದ ಭಕ್ತಿ ನಲಿಕೆ ಸಂಪನ್ನ

0

ಕೊಕ್ಕಡ: ಭಾಸ್ಕರ ಕೊಕ್ಕಡ ಇವರ ಸಾರಥ್ಯದಲ್ಲಿ ಶ್ರೀ ನಮೋ ವಿಷ್ಣುಮೂರ್ತಿ ವಿಶ್ವ ಹಿಂದೂ ಪರಿಷತ್ ಭಜನಾ ಮಂಡಳಿಯ ಸಹಬಾಗಿತ್ವದಲ್ಲಿ ಹಾಗೂ ಊರವರ ಸಹಕಾರದೊಂದಿಗೆ ಎರಡನೇ ವರ್ಷದ ಬಿಸು ಪರ್ಬದ ಭಕ್ತಿ ನಲಿಕೆ – ಕುಣಿತ ಭಜನಾ ಕಾರ್ಯಕ್ರಮ ಎ.14ರಂದು ಪಟ್ರಮೆಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ನೆರವೇರಿತು.

ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ನೂರಿತ್ತಾಯ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀಧರ ಶಬರಾಯ, ಪವಿತ್ರ ಪಾಣಿ ಪ್ರಶಾಂತ್ ಶಬರಾಯ, ವಸರಿ ಕಟ್ಟಿ ಸೇವಾ ಸಮಿತಿಯ ಅಧ್ಯಕ್ಷ ಕೊರಗಪ್ಪ ಶೆಟ್ಟಿ, ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಎಸ್ ವಿ ಟಿ ಸ್ಪೋರ್ಟ್ಸ್ ಕ್ಲಬ್ ನ ದೀಕ್ಷಿತ್ ಭರ್ಕಳ, ವೀರ ಕೇಸರಿಯ ಅನಾರು ಇದರ ಮೋಹನ ಅಶ್ವತ್ತಡಿ ಉಪಸ್ಥಿತರಿದ್ದರು.

ಕುಣಿತ ಭಜನೆ ಸದಸ್ಯರಿಗೆ ಕೇಸರಿ ಶಾಲು ನೀಡಿ ಗೌರವಿಸಲಾಯಿತು ನಂತರ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here