ಬೆಳ್ತಂಗಡಿ-ಉಜಿರೆ ಹೆದ್ದಾರಿಯಲ್ಲಿ ಖಾಸಗಿ ಬಸ್ ಕೆಟ್ಟು ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತ- ಸಾರ್ವಜನಿಕರಿಂದ ಆಕ್ರೋಶ

0

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಒಂದು ಕೆಟ್ಟು ನಿಂತ ಪರಿಣಾಮ ಉಜಿರೆ- ಬೆಳ್ತಂಗಡಿ ನಡುವೆ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಟಿ.ಬಿ ಕ್ರಾಸ್ ಸಮೀಪ ಹೆದ್ದಾರಿ ಕಾಮಗಾರಿಗೆಂದು ಅಗೆದು ಹಾಕಿರುವ ಜಾಗದಲ್ಲಿಯೇ ಭಾನುವಾರ(ಎ.14ರಂದು) ರಾತ್ರಿಯ ವೇಳೆ ಖಾಸಗಿ ಬಸ್ ಕೆಟ್ಟು ನಿಂತಿದೆ.

ರಸ್ತೆಯ ಮದ್ಯದಲ್ಲಿಯೇ ಬಸ್ ನಿಂತಿರುವುದರಿಂದ ಏಕ ಮುಖ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದ್ದು ಅಡಚಣೆಯುಂಟಾಗಿದೆ.

ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳದಲ್ಲಿದ್ದು ಟ್ರಾಫಿಕ್ ನಿಯಂತ್ರಿಸುತ್ತಿದ್ದು ಸುಗಮ ಸಂಚಾರಕ್ಕೆ ಅವಕಾಶಮಾಡುವ ಪ್ರಯತ್ನದಲ್ಲಿದ್ದಾರೆ.

ರಾತ್ರಿವೇಳೆ ಬಸ್ ಕಟ್ಟು ನಿಂತಿದ್ದರೂ ಅದನ್ನು ರಸ್ತೆಯಿಂದ ಸ್ಥಳದಿಂದ ತೆರವುಗೊಳಿಸಲು ಕಂಪೆನಿಯವರು ಕ್ರಮ ಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ಪಡಿಸಿದ್ದಾರೆ.

LEAVE A REPLY

Please enter your comment!
Please enter your name here