ಓಡಲ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಸಮಾಲೋಚನಾ ಸಭೆ

0

ಉಜಿರೆ : ಇಲ್ಲಿಯ ಓಡಲ ಚಾಮುಂಡಿ ನಗರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಎ.29ರಂದು ನಡೆಯಲಿದ್ದು ಇದರ ಪೂರ್ವ ತಯಾರಿ ಕುರಿತು ಸಮಾಲೋಚನಾ ಸಭೆ ದೈವಸ್ಥಾನದಲ್ಲಿ ಎ.14ರಂದು ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರು ಮಾತನಾಡಿ ಪ್ರತಿಷ್ಠೆಗೊಂಡು 12 ವರ್ಷವಾಗಿದ್ದು ಇದರ ಅಂಗವಾಗಿ ವಿಶೇಷವಾಗಿ ಚಂಡಿಕಾ ಯಾಗ ಮತ್ತು ಪ್ರತಿವರ್ಷದಂತೆ ವೈದಿಕ, ಧಾರ್ಮಿಕ, ಸಾಂಸ್ಕೃಕ ಕಾರ್ಯಕ್ರಮದ ವಿವರ ನೀಡಿದರು. ನಿರ್ಮಾಣ ಗೊಳ್ಳಲಿರುವ ಅನ್ನ ಛತ್ರಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಟ್ರಸ್ಟ್ ಕಾರ್ಯದರ್ಶಿ ಪರಮೇಶ್ವರ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಹರೀಶ್ ಕಾವ, ಕೋಶಾಧಿಕಾರಿ ಸುರೇಶ್ ಆಚಾರ್, ಟ್ರಷ್ಟಿಗಳಾದ ಶ್ರೀನಿವಾಸ ಗೌಡ ಮಧುರ, ಸುರೇಶ ಗೌಡ ಕೂಡಿಗೆ, ಅಣ್ಣಿ ಗೌಡ ಮೈಂದ್ರೆಲ್, ಪದ್ದಣ್ಣ ಗೌಡ ಓಡಲ, ಪ್ರತಿಷ್ಠಾ ವರ್ಧಂತಿ ಸಮಿತಿ ಸದಸ್ಯರುಗಳಾದ ಜಯರಾಮ ಶೆಟ್ಟಿ ಕೆಂಬರ್ಜೆ, ರಮೇಶ್ ಮಯ್ಯ, ಧನರಾಜ್ ಶೆಟ್ಟಿ, ತಿರುಮಲೇಶ್ವರ ಭಟ್, ಸತೀಶ್ ಗೌಡ ಕಕ್ಕರಬೆಟ್ಟು, ಉದಯ ಭಾನು, ಸೇವಂತಿ ನಿರಂಜನ್, ಚಂದ್ರಶೇಖರ್ ಶೆಟ್ಟಿ, ಜಾರಪ್ಪ ಪೂಜಾರಿ ಕೇದ್ಲ,, ರಾಮಕೃಷ್ಣ ಭಟ್ ನಿನ್ನಿಕಲ್, ಸೂರಪ್ಪ ಗೌಡ ದೊಂಪದಪಲ್ಕೆ, ದಾಮೋದರ ಮೊದಲದವರು ಹಾಜರಿದ್ದು ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here