ಎ.10: ಧರ್ಮಸ್ಥಳ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಕಾರ್ಯಕ್ರಮ- ಪ್ರಥಮ ವರ್ಷದ ಸಂಭ್ರಮ

0

ಧರ್ಮಸ್ಥಳ: ಜೋಡುಸ್ಥಾನ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಪ್ರಥಮ ವರ್ಷದ ಸಂಭ್ರಮವು ಎ.10ರಂದು ಸಂಜೆ 5.45ರಿಂದ ರಾತ್ರಿ 9.00ರವರೆಗೆ ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಂಗಳೂರು ಕದ್ರಿ ನೃತ್ಯ ಭಾರತಿ ಕಲಾಶ್ರೀ ಗುರು ಗೀತಾ ಸರಳಾಯ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಡಿ.ಹರ್ಷೇಂದ್ರ ಕುಮಾ‌ರ್, ಮಂಗಳೂರು ಕದ್ರಿ ನೃತ್ಯ ಭಾರತಿ ವಿದುಷಿ ರಶ್ಮಿ ಚಿದಾನಂದ್‌ ಭಾಗವಹಿಸಲಿದ್ದಾರೆ.

ಉಜಿರೆ ವಾಣಿಶ್ರೀ ನೃತ್ಯ ಕೇಂದ್ರದ ಶಾಂತ ಪಡುವೆಟ್ನಾಯ ರಿಗೆ ನೃತ್ಯ ದೀಪ ಪ್ರಶಸ್ತಿ ಪ್ರದಾನ ನಡೆಯಲಿದೆಯೆಂದು ಅದ್ಯಕ್ಷೆ ವಿದುಷಿ ಕು.ಚೈತ್ರಾ ಎಮ್, ಉಪಾಧ್ಯಕ್ಷೆ ಮೀನಾಕ್ಷಿ ಜಿ ಭಟ್‌, ಗೌರವ ಸಲಹೆಗಾರ ಸುಬ್ರಹ್ಮಣ್ಯ ಪ್ರಸಾದ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here