ಪ್ರವೀಣ್ ಮದ್ದಡ್ಕ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ನಿಂದನೆ: ಕೊಕ್ಕಡ ಶಾಖೆಯ ಸಂಚಾಲಕರಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು

0

ಕೊಕ್ಕಡ: ದಲಿತರನ್ನು ಅತ್ಯಂತ ನಿಕೃಷ್ಟವಾಗಿ.ಅತ್ಯಂತ ಕೆಟ್ಟ ಶಬ್ದಗಳಿಂದ ಮತ್ತು ಸಮಾನತೆಯ ದಲಿತರ ಅಸ್ಮಿತೆಯ ಪ್ರತೀಕವಾದ ನಾವೆಲ್ಲರು ಗೌರವ ನೀಡುವಂತ ನೀಲಿ ಬಣ್ಣದ ಶಾಲ್ ನ್ನು ತನ್ನ ಕೊಳಕು ಮನಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅನಾವರಣ ಮಾಡಿದ ಪ್ರವೀಣ್ ಮದ್ದಡ್ಕ ಎಂಬ ವ್ಯಕ್ತಿಯ ಮೇಲೆ ಕೇಸ್ ದಾಖಲಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಕ್ಕಡ ಹೋಬಳಿ ಶಾಖೆಯ ಸಂಚಾಲಕರಾದ ಗಣೇಶ್ ಕಣಿಯೂರು ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಸಂಚಾಲಕರಾದ ನಾರಾಯಣ ಪುದುವೆಟ್ಟು, ತಾಲೂಕು ಖಜಾಂಚಿ ಶ್ರೀಧರ್ ಕಳೆಂಜ, ಬಿ.ಕೆ.ಶೇಖರ್ ಕಣಿಯೂರು, ಜಿಲ್ಲಾ ಸಮಿತಿ ಸದಸ್ಯರಾದ ಸೇಸಪ್ಪ ನೆಕ್ಕಿಲು, ಸುರೇಶ್ ಪುದುವೆಟ್ಟು, ರಾಜೇಶ್ ಕಾಯರ್ತಡ್ಕ, ಉಮೇಶ್ ಕಾಯರ್ತಡ್ಕ, ಕೂಸಪ್ಪ ಎನ್ ಉಪ್ಪಿನಂಗಡಿ ಉಪಸ್ಧಿತರಿದ್ದರು.

LEAVE A REPLY

Please enter your comment!
Please enter your name here