ನಿವೃತ್ತ ಬ್ಯಾಂಕ್ ಅಧಿಕಾರಿ ಶೇಖರ ಬಂಗೇರ ಹೇರಾಜೆ ರಸ್ತೆ ಅಪಘಾತದಲ್ಲಿ ಸಾವು

0

ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆಯಲ್ಲಿ ರಸ್ತೆ ದಾಟುವ ವೇಳೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ ನಿವೃತ್ತ ಬ್ಯಾಂಕ್ ಅಧಿಕಾರಿ ಶೇಖರ ಬಂಗೇರ ಹೆರಾಜೆ ಸಾವನ್ನಪ್ಪಿದ್ದಾರೆ.

ಶೇಖರ್ ಹೆರಾಜೆಯವರು ಹೊಟೇಲ್ ನಿಂದ ಪಾರ್ಸೆಲ್ ತೆಗೆದುಕೊಂಡು ಬರುವಾಗ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಕೂಟರ್ ಸವಾರೆಯೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶೇಖರ ಬಂಗೇರ ಹೆರಾಜೆಯವರು ಶ್ರೀ ಗುರು ನಾರಾಯಣ ಸ್ವಾಮಿ ಸೇವಾಸಂಘದ ಮಾಜಿ ಉಪಾಧ್ಯಕ್ಷರಾಗಿದ್ದು, ನಿವೃತ್ತ ಎಸ್ ಪಿ ಪಿತಾಂಬರ ಹೆರಾಜೆಯವರ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂರವರ ಮಾವರಾಗಿದ್ದಾರೆ.

LEAVE A REPLY

Please enter your comment!
Please enter your name here