ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ

0

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ದುರ್ಗಾದೇವಿ ದೇವಸ್ಥಾನಲ್ಲಿ ದಾರ್ಮಿಕ ಸಭಾ ಕಾರ್ಯಕ್ರಮವು ಧರ್ಮಸ್ಥಳ, ಕೃಷಿ ವಿಭಾಗದ ಮುಖ್ಯಸ್ಥ ಬಲಕೃಷ್ಣ ಪೂಜಾರಿ ಬಜೆಗುತ್ತು ಮನೆ ಕೊಯ್ಯೂರು ಇವರ ಅಧ್ಯಕ್ಷತೆಯಲ್ಲಿ ಮಾ.25ರಂದು ಕೊಲ್ಲಿ ಶ್ರೀ ದುರ್ಗಾದೇವಿ ವೇದಿಕೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸವನ್ನು ಕರ್ನಾಟಕ ರಾಜ್ಯ ಸಮನ್ವಯಕರು ಹಿಂದೂ ಜನಜಾಗೃತಿಯ ಗುರುಪ್ರಸಾದ್ ಗೌಡ ನೆರವೇರಿಸಿದರು.

ವೇದಿಕೆಯಲ್ಲಿ ಕೊಲ್ಲಿ ದೇವಸ್ಥಾನ ಹಾಗೂ ದೇವಳದ ಜ್ಯೋತಿಷಿಯವರಿಗೆ ಮತ್ತು ಆಡಳಿತ ನಡೆಸಿದ ಆಡಳಿತ ಮೋಕ್ತೇಸರರು ಹಾಗೂ ಆಡಳಿತಾಧಿಕಾರಿಗಳಿಗೆ ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರು ಕೆ.ಮಂಜುನಾಥ್ ಕಾಮತ್, ಬಾರ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರ ಜಯಕೀರ್ತಿ ಜೈನ್, ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಶಿವಾನಂದ ರಾವ್ ಕಕ್ಕೆನೇಜಿ, ರಾಜೇಂದ್ರ ಗೌಡ ಬೆಡಿಗುತ್ತು, ಕೃಷಿಕರಾದ ಪೂವಪ್ಪ ಗೌಡ ಕೊಂಡಮಲೆ, ಪದ್ಮನಾಭ ಗೌಡ ಬನದಬಾಗಿಲು, ರಮೇಶ್ ಗೌಡ ನಂದಿಲ, ಮಂಜುನಾಥ್ ಗೌಡ ಕೊಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಾನಿ ಜನಾರ್ದನ ಕಾನರ್ಪ ನಿರೂಪಿಸಿ, ಜಯಲಕ್ಷ್ಮಿ ಉಪನ್ಯಾಸಕರು ಸಕಲೇಶಪುರ ಸ್ವಾಗತಿಸಿ, ಡಾ.ಪ್ರಶಾಂತ್ ವಂದಿಸಿದರು.

ದುರ್ಗಾಪರಮೇಶ್ವರಿ ದುರ್ಗಾದೇವಿ ಮಹಾಗಣಪತಿ ದೇವರ ಪ್ರತಿಷ್ಠೆ ನಡೆಯಿತು.

LEAVE A REPLY

Please enter your comment!
Please enter your name here