ಬೆಳ್ತಂಗಡಿ: ಸ್ಪಂದನ ಸೇವಾ ಸಂಘದಿಂದ ಧನ ಸಹಾಯ

0

ಬೆಳ್ತಂಗಡಿ: ಸ್ಪಂದನ ಸೇವಾ ಸಂಘದಿಂದ ಅಪಘಾತಕ್ಕೆ ಒಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಳೆಂಜ ಗ್ರಾಮದ ಮೊನಪ್ಪ ಗೌಡರ ಮಗ ತೇಜಸ್ ಇವರ ಚಿಕಿತ್ಸೆಗಾಗಿ ಸ್ಪಂದನ ಸೇವಾ ಸಂಘದಿಂದ 15,000 ಸಾವಿರ ಚೆಕ್ ನ್ನು ಸುಳ್ಯ ನೆಹರು ಸ್ಮಾರಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಅನುರಾಧ ಕುರುಂಜಿ ಹಸ್ತಾಂತರಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ, ಗುರುವಾಯನಕೆರೆ ಸ.ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯಿನಿ ಉಮಾ.ಡಿ.ಗೌಡ, ಗೌಡರ ಯಾನೆ ಒಕ್ಕಳಿಗ ಸೇವಾ ಸಂಘದ ನಿರ್ದೇಶಕಿ ಉಷಾ ವೆಂಕಟರಮಣ, ತಾಲೂಕು ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶುಭಾಷಿಣೆ ಜನಾರ್ದನ ಗೌಡ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಲೀಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here