ಇಂದಬೆಟ್ಟು ಸಮಿಪ ಮರದಲ್ಲಿ ಕಾಣಿಸಿಕೊಂಡ ಬೆಂಕಿ- ದೇವನಾರಿ ತಂಡದ ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ದುರಂತ

0

ಇಂದಬೆಟ್ಟು: ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ ನಿವಾಸಿ ವೀರಮ್ಮ ರವರ ಮನೆಯ ಅಂಗಳದ ಗೇರುಬೀಜದ ಮರಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಮನಗಂಡ ಟೀಮ್ ದೇವನಾರಿ ತಂಡದ ಸದಸ್ಯರು, ಲೈನ್ ಮ್ಯಾನ್ ಗಳಾದ ಗೋವಿಂದ ಮತ್ತು ರಾಘವೇಂದ್ರ ಇಂದಬೆಟ್ಟು ಇವರನ್ನು ಸಂಪರ್ಕಿಸಿ ಬೆಂಕಿ ನಂದಿಸುವುದರ ಜೊತೆಗೆ ವಿದ್ಯುತ್ ತಂತಿಗೆ ತಾಗುತ್ತಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿದರು.

ದೊಡ್ಡ ಅವಘಡವನ್ನು ತಪ್ಪಿಸಿ, ಸುಗಮ ವಿದ್ಯುತ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಸಂದರ್ಭದಲ್ಲಿ ತಕ್ಷಣಕ್ಕೆ ಲೈನ್ ಮ್ಯಾನ್ ಗೋವಿಂದ ಮತ್ತು ರಾಘವೇಂದ್ರ ಸಹಕರಿಸಿದರು. ಹಾಗೂ ಟೀಮ್ ದೇವನಾರಿ ತಂಡದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here