ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ಮಹಾಸಭೆ- ಅಧ್ಯಕ್ಷರಾಗಿ ಕೆ.ಶ್ರೀಧರ ರಾವ್ ಕಾಯಡ, ಕಾರ್ಯದರ್ಶಿಯಾಗಿ ಕುಸುಮಾಕರ್, ಕೋಶಾಧಿಕಾರಿಯಾಗಿ ಕೇಶವ ಗೌಡ ಮರು ಆಯ್ಕೆ

0

ಕಳೆಂಜ: ಕಳೆಂಜ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಮಹಾಸಭೆಯು ದೇವಸ್ಥಾನದ ವಠಾರದಲ್ಲಿ ಊರವರ ಸಮ್ಮುಖದಲ್ಲಿ ನಡೆಯಿತು.

ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ಶ್ರೀಧರ ರಾವ್ ಕಾಯಡ ಮರು ಆಯ್ಕೆಯಾಗಿದ್ದಾರೆ.

ಇವರು 2021ರಿಂದ 2024ರ ಅವಧಿಯಲ್ಲಿ ಈ ಹಿಂದೆಯೂ ಅಧ್ಯಕ್ಷರಾಗಿಯೇ ದೇವಸ್ಥಾನದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಇದೀಗ ಪುನಃ ಮರು ಆಯ್ಕೆಗೊಂಡಿರುತ್ತಾರೆ.

ಅದೇ ರೀತಿ ಕಾರ್ಯದರ್ಶಿಯಾಗಿ ಕುಸುಮಾಕರ್ ಮತ್ತು ಕೋಶಾಧಿಕಾರಿಯಾಗಿ ಕೇಶವ ಗೌಡ ಇವರು ಕೂಡ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here