ರೆಖ್ಯಾದಲ್ಲಿ ಮಕ್ಕಳ ಕುಣಿತ ಭಜನಾ ಸಮಾವೇಶ

0

ರೆಖ್ಯಾ: ಮಕ್ಕಳಲ್ಲಿ ಎಳವೆಯಲ್ಲೆ ಧಾರ್ಮಿಕ ಪ್ರಜ್ಞೆ ಮೂಡಲು ಭಜನೆ ಸಹಕಾರಿ.ಭಜನೆಯಿಂದ ಮಕ್ಕಳಲ್ಲಿ ಹೆಚ್ಚು ಧಾರ್ಮಿಕ ಜಾಗ್ರತಿ ಮೂಡುತ್ತದೆ. ಪುರಾಣ ಕಥೆಗಳ ಜಾಗ್ರತಿ ಹೆಚ್ಚುತ್ತದೆ.

ಸಮಾಜದಲ್ಲಿ ಸಂಸ್ಕಾರ ಬಲವಾಗುತ್ತದೆ. ಎಂದು ಧರ್ಮಸ್ಥಳ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೆಶಕರಾದ ಜಯರಾಮ ನೆಲ್ಲಿತ್ತಾಯ ತಿಳಿಸಿದರು.

ಅವರು ಬೆಳ್ತಂಗಡಿ ತಾಲೂಕಿನ ರೆಖ್ಯಾ ಶ್ರೀ ಗುಡ್ರಾಮಲ್ಲೆಶ್ವರ ದೇವಾಲಯದಲ್ಲಿ ನಡೆದ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮದ ಸಮಾರೋಪದ ಉದ್ಘಾಟನೆ ಮಾಡಿ ಮಕ್ಕಳನ್ನು ಹರಸಿದ್ದರು.

ಕಾರ್ಯಕ್ರಮದಲ್ಲಿ ಸಂಘಟಕರಾದ ರೆಖ್ಯಾ ಶ್ರೀಧರ, ಗುರುಗಳಾದ ಹತ್ಯಡ್ಕ ಕೃಷ್ಣಪ್ಪ, ದೇವಾಲಯ ಅರ್ಚಕರಾದ ತಿರುಮಲೆಶ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here