ಮಾಯ ಮಾರಿಪೂಜೆ ಪೂಜಾ ಸಮಿತಿಗೆ ಪಾರಳ ಕೃಷ್ಣಮೂರ್ತಿ ಬಾರಿತ್ತಾಯ ಸ್ಮರಣಾರ್ಥ ನೀರಿನ ಟ್ಯಾಂಕ್ ಕೊಡುಗೆ

0

ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೊತ್ಸವ ಸಂದರ್ಭ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಮಾರಿಪೂಜಾ ಕಾರ್ಯಕ್ರಮದ ಅಂಗವಾಗಿ ಮಾರಿಪೂಜಾ ಸಮಿತಿಗೆ ಪಾರಳ ಕೃಷ್ಣಮೂರ್ತಿ ಬಾರಿತ್ತಾಯ ಸ್ಮರಣಾರ್ಥ ಅವರ ಪುತ್ರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶಿವಕುಮಾರ್ ಬಾರಿತ್ತಾಯರವರು 2000 ಲೀಟರ್ ನೀರಿನ ಟ್ಯಾಂಕ್ ನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮ ಗೌಡ ಮತ್ತು ಮಾರಿಪೂಜಾ ಸಮಿತಿ ಅಧ್ಯಕ್ಷ ಸಂಜಿವ ಗೌಡ ಅಮುಂಜಿ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾರಿಪೂಜಾ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಾರಾಯಣ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here