ರಾಷ್ಟ್ರೀಯ ವಿ.ವಿ. ಕಬ್ಬಡಿ ಪಂದ್ಯಾಟ ಮಂಗಳೂರು ವಿ.ವಿ. ಗೆ ಚಿನ್ನದ ಪದಕ-ತಂಡದಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನ 4 ಮಂದಿ ಭಾಗಿ

0

ಉಜಿರೆ: ಭಾರತ ಸರಕಾರದ ಯುವಜನ ಕ್ರೀಡಾ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಆಯೋಜಿಸಿದ 5ನೇ Khelo India ರಾಷ್ಟ್ರೀಯ ವಿಶ್ವ ವಿದ್ಯಾಲಯದ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ವಿ.ವಿ.ಚಿನ್ನದ ಪದಕ ಪಡೆದುಕೊಂಡಿದೆ.

ಅಸ್ಸಾಂಮಿನ ಗೌಹಟಿಯಲ್ಲಿ ಫೆಬ್ರವರಿ 18 ರಿಂದ 21 ರ ವರೆಗೆ ನಡೆಯಿತು.ಈ ಚಾಂಪಿಯನ್ ಶಿಪ್ ನಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರು ವಿಶ್ವ ವಿದ್ಯಾಲಯ ಕಬಡ್ಡಿ ತಂಡವು ಚಿನ್ನದ ಪದಕ ಪಡೆದು ಇತಿಹಾಸ ನಿರ್ಮಿಸಿ ಕರ್ನಾಟಕ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಲು ಕಾರಣವಾಯಿತು.

ಈ ತಂಡದಲ್ಲಿ ಉಜಿರೆ ಶ್ರೀ ಧ.ಮ.ಕಾಲೇಜಿನ 4 ಮಂದಿ ಆಟಗಾರರಾದ ಸುಶಾಂತ್ ಶೆಟ್ಟಿ, ಪ್ರಜ್ವಲ್, ಶಶಾಂಕ್, ಆಫ್ರಿದ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here