ಫೆ.21: ವೇಣೂರಿಗೆ ಯುಗಳ ಮುನಿಗಳ ಪುರಪ್ರವೇಶ

0

ವೇಣೂರು: ವೇಣೂರಿನಲ್ಲಿ ಫೆ.22ರಿಂದ ಮಾ.1ರವರೆಗೆ ನಡೆಯಲಿರುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದಲ್ಲಿ ದಿವ್ಯ ಉಪಸ್ಥಿತಿಯೊಂದಿಗೆ ಮಂಗಲ ಪ್ರವಚನ ನೀಡಲಿರುವ ಯುಗಳಮುನಿಗಳಾದ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಅಮರಕೀರ್ತಿ ಮುನಿಮಹಾರಾಜರು ಬುಧವಾರ ವೇಣೂರು ಪುರಪ್ರವೇಶ ಮಾಡುವರು.

ಅವರನ್ನು ಬೆಳಗ್ಗೆ 7 ಗಂಟೆಗೆ ವೇಣೂರು ಚರ್ಚ್ ಬಳಿಯಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಬಾಹುಬಲಿ ಕ್ಷೇತ್ರಕ್ಕೆ ಕರೆತರಲಾಗುವುದು ಎಂದು ಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಹಾಗೂ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಮತ್ತು ಪ್ರಧಾನಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here