ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ-ಹಸಿರು ಹೊರೆಕಾಣೆಕೆ ಸಮರ್ಪಣೆ ಭವ್ಯ ಮೆರವಣಿಗೆ

0

ಅರಿಕೆಗುಡ್ಡೆ: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಅರಸಿನಮಕ್ಕಿ ಕೇಂದ್ರ ಮೈದಾನದಿಂದ ದೇವಸ್ಥಾನದವರೆಗೆ ಹಸಿರು ಹೊರೆಕಾಣಿಕೆ ಫೆ.18 ರಂದು ಸರ್ಮಪಿಸಲಾಯಿತು.
ಅರಸಿನಮಕ್ಕಿ‌ ಕೇಂದ್ರ ಮೈದಾನದಲ್ಲಿ ಹೊರೆಕಾಣಿಕೆಯ ಮೆರವಣಿಗೆಯನ್ನು ಕೊಕ್ಕಡ ವೈದ್ಯರಾದ ಮೋಹನ್ ದಾಸ್ ಗೌಡ ಚಾಲನೆ ನೀಡಿದರು.

ಇನ್ನೂ ಹತ್ಯಡ್ಕ ಗ್ರಾಮಸ್ಥರಿಂದ ಅಡಿಕೆ, ತೆಂಗಿನ ಕಾಯಿ, ಬಾಳೆಗೊನೆ, ತರಕಾರಿ, ಧಾನ್ಯಗಳು ಇನ್ನಿತರ ವಸ್ತುಗಳನ್ನು ಭವ್ಯ ಮೆರವಣಿಗೆ ಮೂಲಕ ಸಮರ್ಪಿಸಿದರು.ಮೆರೆವಣೆಗೆಯಲ್ಲಿ ಚೆಂಡೆ, ನಾಸಿಕ್ ಬ್ಯಾಂಡ್, ಹುಲಿ ವೇಷ, ವಿವಿಧ ವೇಷಗಳು ಆಕರ್ಷಣೀಯಾಗಿತ್ತು.ದಾರಿಯುದ್ದಕ್ಕೂ ಪಾನೀಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್‌ ಪಿಲಿಕ್ಕಬೆ, ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಮುರುಳೀಧರ ಶೆಟ್ಟಿಗಾ‌ರ್, ಬ್ರಹ್ಮಕಲಶೋತ್ಸವ ಸಮಿತಿ ಸಹ ಸಂಚಾಲಕ ಜಯಪ್ರಸಾದ್‌ ಶೆಟ್ಟಿಗಾ‌ರ್ ಹಾಗೂ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರು, ವೈದಿಕ ಸಮಿತಿಯವರು, ಸದಸ್ಯರು, ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here