ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದಿಂದ ವೀಲ್ ಚೇರ್ ಹಸ್ತಾಂತರ

0

ತೆಂಕಕಾರಂದೂರು: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಕಾರಂದೂರು ಗ್ರಾಮದ ಪ್ರಶಾಂತ ಹಾಗೂ ಲಾವಣ್ಯ ದಂಪತಿಯ ಏಳು ವರ್ಷದ ಪುತ್ರಿ ಕು.ಮಾನ್ಯ ಹುಟ್ಟಿನಿಂದಲೇ ಬುದ್ದಿಮಾಂದ್ಯ
ಹಾಗೂ ವಿಕಲಚೇತನೆಯಾಗಿದ್ದು ಎಲ್ಲಾ ಕೆಲಸಗಳಿಗೂ ಇನ್ನೊಬ್ಬರನ್ನೇ ಅವಲಂಬಿತವಾಗಿರ ಬೇಕಾದಂತಹ ಸನ್ನಿವೇಶ.ಇಂತಹ ಪರಿಸ್ಥಿತಿಯಲ್ಲಿ ಉಜಿರೆ ಗ್ರಾಮ ಅಂಗವಿಕಲರ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ ಅವರ ಮನವಿಗೆ ಕೂಡಲೇ ಸ್ಪಂದಿಸಿದ ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘವು, ಆ ವಿಕಲಚೇತನ ಮಗುವಿಗಾಗಿ ರೂ 19000/- ಮೌಲ್ಯದ ವಿಶೇಷ ವೀಲ್ ಚೇರ್ ನ್ನು ಫೆ.18ರಂದು ಅವರ ಮನೆಗೆ ಹೋಗಿ ನೀಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ, ಪೂರ್ವಾಧ್ಯಕ್ಷ ನವೀನ್ ಚಂದ್ರ ಕಜೆಕಾರ್, ಕೋಶಾಧಿಕಾರಿ ಗಣಪತಿ ಭಟ್, ಸಂಚಾಲಕ ಪ್ರಕಾಶ್ ಹಾಗೂ ಉಜಿರೆ ಗ್ರಾಮದ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ, ಬಳಂಜ ಗ್ರಾಮದ ಪುನರ್ವಸತಿ ಕಾರ್ಯಕರ್ತೆ ಕು.ವಿನೋದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here