ತೋಟತ್ತಾಡಿ ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ

0

ತೋಟತ್ತಾಡಿ : ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ, ಚಿಬಿದ್ರೆ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ತೋಟತ್ತಾಡಿ, ಚಿಬಿದ್ರೆ ಇದರ ಜಂಟಿ ಆಶ್ರಯದಲ್ಲಿ ಫೆ.10ರಂದು ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಜಯವಿಕ್ರಮ್ ಕಲ್ಲಾಪು, ಶಾಂತ ಬಂಗೇರ ಹಾಗೂ ಸುಮತಿ ಬಂಗೇರ ಆಗಮಿಸಿದರು.ತೋಟತ್ತಾಡಿಯಲ್ಲಿ ಮೊದಲು ವೈದಿಕ ಶಿಕ್ಷಣವನ್ನು ಪಡೆದ ಕಂಕನಾಡಿ ಗರಡಿಯ ಅರ್ಚಕರಾಗಿರುವ ಹರೀಶ್ ಶಾಂತಿ ಇವರನ್ನು ಸನ್ಮಾನಿಸಲಾಯಿತು, ಜೊತೆಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.

ವೇದಿಕೆಯಲ್ಲಿ ತಿಮ್ಮಪ್ಪ ಪೂಜಾರಿ ಹಾರಗಂಡಿ, ಶೇಖರ ಪೂಜಾರಿ ಕಳೆಂಜೊಟ್ಟು, ಜಯಾನಂದ ಡಿ.ಮಜಲು, ಹೊನ್ನಪ್ಪ ಪೂಜಾರಿ, ಹರೀಶ್ ಶಾಂತಿ,ಶ್ರೀಮತಿ ಉಷಾ ರಮಾನಂದ ಉಪಸ್ಥಿತರಿದ್ದರು.

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ತೋಟತ್ತಾಡಿ, ಚಿಬಿದ್ರೆಯ ನೂತನ ಅಧ್ಯಕ್ಷರಾಗಿರುವ ಸನತ್ ಕುಮಾರ್ ಮೂರ್ಜೆ ಇವರು ಸ್ವಾಗತಿಸಿದರು.ಪವಿತ್ರ ನಿರೂಪಿಸಿದರು.

LEAVE A REPLY

Please enter your comment!
Please enter your name here