ನೇರೋಳ್‌ಪಲ್ಕೆಯಲ್ಲಿ ಶ್ರೀ ರಾಮೋತ್ಸವ-2024

0

ಕನ್ಯಾಡಿ-1: ಶ್ರೀ ರಾಮ ಗೆಳೆಯರ ಬಳಗ ನೇರೊಳ್ ಪಲ್ಕೆ ಇದರ ವತಿಯಿಂದ ಅಯೋಧ್ಯಾ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಸವಿನೆನಪಿಗಾಗಿ ಶ್ರೀ ರಾಮೋತ್ಸವ ಜ.27ರಂದು ನೇರೊಳ್ ಪಲ್ಕೆ ಅಂಗನವಾಡಿ ವಠಾರದಲ್ಲಿ ನಡೆಯಿತು.ಇದರ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಕಾಶ್ ಭಟ್ ಸುರ್ಯ ಇವರ ಪೌರಹಿತ್ಯದಲ್ಲಿ ನೆರವೇರಿತು.

ಕುಣಿತ ಭಜನಾ ಕಾರ್ಯಕ್ರಮವನ್ನು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸುಳ್ಯೊಡಿ ನಾವೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು,ಶ್ರೀ ನರಸಿಂಹ ಭಜನಾ ಮಂಡಳಿ ನಡ ಮತ್ತು ಶ್ರೀ ಬ್ರಹ್ಮದೇವ ಭಜನಾ ಮಂಡಳಿ ಅರಳಿ ನೆರವೇರಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ರಾಮ್ ಕುಮಾರ್ ಮರ್ನಾಡ್ ನೀಡಿದರು.ಶ್ರೀ ರಾಮ ಗೆಳೆಯರ ಬಳಗದ ಅದ್ಯಕ್ಷರಾದ ಯೋಗೀಶ್ ಬಿ ಅರ್, ಮುಖ್ಯ ಅತಿಥಿಗಳಾದ ಶಾಸಕ ಹರೀಶ್ ಪೂಂಜ, ಎಂಎಲ್ಸಿ ಪ್ರತಾಪಸಿಂಹ ನಾಯಕ್, ಡಾ.ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವೂರು, ಜಯಂತ್ ಗೌಡ, ಹರೀಶ್ ಮೋರ್ತಾಜೆ, ಅಜಿತ್ ಅರಿಗ, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.

ಶಶಿಕಾಂತ್ ಬೀಮಂಡೆ ಅತಿಥಿಗಳನ್ನು ಸ್ವಾಗತಸಿದರು. ಜಗದೀಶ್ ಕೊಡಿಕ್ಕು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here