ವೇಣೂರು ಮಹಾಮಸ್ತಕಾಭಿಷೇಕಕ್ಕೆ ಮೈಸೂರು ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಆಹ್ವಾನ-ಅಳದಂಗಡಿ ಅರಸರ ಕುಟುಂಬಸ್ಥರಿಂದ ಆಮಂತ್ರಣ

0

ಮೈಸೂರು: ವೇಣೂರಿನ ಬಾಹುಬಲಿಗೆ ಫೆಬ್ರವರಿ 22 ರಿಂದ ಮಾರ್ಚ್ 1ರವರೆಗೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಅಳದಂಗಡಿ ಅರಸರು ಆಹ್ವಾನಿಸಿದ್ದಾರೆ.ಮೈಸೂರು ಅರಮನೆಗೆ ತೆರಳಿ ಯದುವೀರ್ ಮತ್ತು ಅವರ ಕುಟುಂಬಸ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಅಳದಂಗಡಿ ಅರಸರಾದ ಡಾ.ಪದ್ಮಪ್ರಸಾದ್ ಅಜಿಲರು, ಅವರ ಧರ್ಮಪತ್ನಿ ಮಧುರಾ ಪದ್ಮಪ್ರಸಾದ್ ಅಜಿಲರು, ಸಹೋದರ ಶಿವಪ್ರಸಾದ್ ಅಜಿಲರು, ಅವರ ಪತ್ನಿ ರೇಖಾ ಶಿವಪ್ರಸಾದ್ ಅಜಿಲರವರು ಮೈಸೂರು ಅರಮನೆಯಲ್ಲಿ ಆಮಂತ್ರಣ ನೀಡಿದರು.ಈ ವೇಳೆ ಯದುವೀರ್ ರನ್ನು ವಿಶೇಷವಾಗಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here