ಕೊಯ್ಯೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀ ಕೃಷ್ಣ ಭಜನಾ ಮಂಡಳಿಯಲ್ಲಿ ಮುಂಜಾನೆಯಿಂದ ಮಧ್ಯಾಹ್ನದ ವರೆಗೆ ಭಜನಾ ಕಾರ್ಯಕ್ರಮ

0

ಕೊಯ್ಯೂರು: ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮತ್ತು ಬಾಲಕ ರಾಮನ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ , ಶ್ರೀ ಕೃಷ್ಣ ಭಜನಾ ಮಂಡಳಿಯಲ್ಲಿ ಜ.22ರಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ಭಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನ 2.00 ಗಂಟೆಯಿಂದ ಮುಸ್ಸಂಜೆಯವರೆಗೆ ಶ್ರೀ ಪಂಚದುರ್ಗಾ ಯಕ್ಷಗಾನ ಸಂಘ ಆದೂರು ಪೇರಾಲ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ರಾಮ ದರ್ಶನ , ಮೋಕ್ಷ ಪ್ರಾಪ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು.

ಭಾಗವತರಾಗಿ ಗಣೇಶ ಸಾಲಿಯಾನ್ ಪುಂಜಾಲಕಟ್ಟೆ, ಕಿಶೋರ್ ಶೆಟ್ಟಿ ಮಡಂತ್ಯಾರು, ಉಮೇಶ್ ಆಚಾರ್ಯ ಕೋಡಿಯೇಲು, ಚೆಂಡೆ ಮದ್ದಳೆ ಯಲ್ಲಿ ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಪತಿ ಭಟ್ ಉಪ್ಪಿನಂಗಡಿ ಮುಂತಾದವರು ಸಹಕರಿಸಿದರು.

ಮುಮ್ಮೇಳದಲ್ಲಿ ಜಿನೇಂದ್ರ ಜೈನ್ ಮಚ್ಚಿನ, ಕೃಷ್ಣ ಪಡಂಗಡಿ, ಶಿವಾನಂದ ಭಂಡಾರಿ ಪಣೆಜಾಲು , ವಿಜಯ ಕುಮಾರ್ ಎಂ ಕೊಯ್ಯೂರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here