ಗೋಳಿಯಂಗಡಿ ಸ್ಫೋಟದ ಮತ್ತಷ್ಟು ಅಪ್ ಡೇಟ್-ತೋಟದಲ್ಲೆಲ್ಲ ಛಿದ್ರ ಛಿದ್ರ ದೇಹ-ಮೂವರ ಸಾವು-ನಾಲ್ಕೈದು ಮನೆಗಳು ಜಖಂ

0

ಗೋಳಿಯಂಗಡಿ: ಸಾಲಿಡ್ ಬಶೀರ್ ಎಂಬಾತನಿಗೆ ಸೇರಿದ ಸುಡುಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿರುವುದರಲ್ಲಿ‌ ಮೂವರು ಸಾವನ್ನಪ್ಪಿರುವ ಮಾಹಿತಿ‌ ಲಭ್ಯವಾಗಿದೆ‌.

ತೋಟದಲ್ಲೆಲ್ಲ‌ ದೇಹಗಳು ಛಿದ್ರ ಛಿದ್ರ!
ಸ್ಫೋಟದ ತೀವ್ರತೆ ಗೆ ದೇಹಗಳು ಛಿದ್ರ ಛಿದ್ರವಾಗಿದ್ದು ಅಡಿಕೆ ಗಿಡದ ಬುಡದಲ್ಲಿ ದೇಹಗಳು ಪತ್ತೆಯಾಗಿವೆ. ತೋಟದ ವಿವಿಧ ಭಾಗಗಳಲ್ಲಿ ಪಾದ,ಕೈ,ಕಾಲು,ಮೆದುಳು ಬಿದ್ದಿರುವ ದೃಶ್ಯಗಳು ತೀವ್ರತೆಯನ್ನು ಸಾರಿ ಹೇಳುತ್ತಿದೆ.

ನಾಲ್ಕೈದು ಮನೆಗಳು ಸಂಪೂರ್ಣ ಜಖಂ
ತೋಟದೊಳಗಿದ್ದ ಘಟಕದ ಪಕ್ಕದಲ್ಲೇ ಇರುವ ಝಿಂಡೋ‌ಎಂಬವರಿಗೆ ಸೇರಿದ ಮನೆ ಸಂಪೂರ್ಣ ಜಖಂಗೊಂಡಿದೆ. ಪಕ್ಕದಲ್ಲೇ ಇರುವ ವೆಂಕಪ್ಪ-ಕಮಲಾ ದಂಪತಿಯ ಮನೆ ಕಂಪ್ಲೀಟ್ ಡ್ಯಾಮೇಜ್ ಆಗಿದ್ದು ಕಣ್ಣೀರು ಹಾಕುತ್ತಿದ್ದಾರೆ. ಉಳಿದಂತೆ ಹಲವು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ

ಆತಂಕಗೊಂಡಿರುವ ಸ್ಥಳೀಯರು: ಸ್ಫೋಟದ ಸದ್ದಿಗೆ ಆತಂಕಗೊಂಡಿರುವ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ತೋಟದೊಳಗೆ ಪತ್ತೆಯಾಗಿರುವ ಕೆಲವು ಸ್ಫೋಟಕಗಳು ಅನುಮಾನಕ್ಕೂ ಕಾರಣವಾಗಿವೆ.ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ಶಾಸಕ ಹರೀಶ್ ಪೂಂಜ, ತಹಶೀಲ್ದಾರ್ ಪೃಥ್ವಿ ಸಾನಿಕಂ ಭೇಟಿ‌ ನೀಡಿದ್ದಾರೆ. ಈಗಾಗ್ಲೇ ತನಿಖೆ ಚುರುಕುಗೊಂಡಿದೆ.

LEAVE A REPLY

Please enter your comment!
Please enter your name here