ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವ

0

ಉಜಿರೆ: ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಕು.ಶೀತಲ್ ಶೆಟ್ಟಿ (ಸಿನಿಮಾ ನಿರ್ದೇಶಕಿ, ನಟಿ, ನಿರೂಪಕಿ, ಮತ್ತು ಮುಖ್ಯ ಚುಣಾವಣಾಧಿಕಾರಿ ಕಛೇರಿ ಕರ್ನಾಟಕದ ಡಿಜಿಟಲ್ ಮಾರ್ಕೆಟಿಂಗ್ ಉಸ್ತುವಾರಿ) ಧ್ವಜಾರೋಹಣ ನಿರ್ವಹಿಸಿದರು.

ಸಂವಿಧಾನದ ಮಹತ್ವವನ್ನು ವಿವರಿಸಿದರು ಹಾಗೂ ಶಾಂತಿವನದ ಚಿಕಿತ್ಸಾ ಸೇವೆಗಳನ್ನು ಶ್ಲಾಸಿದರು.ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರು ಸಂವಿಧಾನದ ಮಹತ್ವವನ್ನು ವಿವರಿಸಿದರು.ಶಾಂತಿವನ ಟ್ರಸ್ಟ್‌ನ ಸ್ಥಾನಿಕ ವೈದ್ಯಾಧಿಕಾರಿ ಡಾ.ಶಶಿಕಿರಣ್ ಎಚ್.ಸಿ ಸ್ವಾಗತ ಕೊರಿದರು.

ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ಧನ್ಯವಾದವನ್ನು ಸಮರ್ಪಿಸಿದರು.

ಆಸ್ಪತ್ರೆಯ ವೈದ್ಯ ವೃಂದ ಹಾಗೂ ಶಾಂತಿವನ ಟ್ರಸ್ಟ್ ನ ಪ್ರಬಂಧಕರು ಸ್ವಸ್ತಿಕ್ ಮತ್ತು ಸಾಧಕರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here