ಬಳ್ಳಮಂಜದಲ್ಲಿ ರಾಮನ ಅದ್ಧೂರಿ ಮೆರವಣಿಗೆ, ರಾಮದೀಪೋತ್ಸವ, ಸಿಡಿಮದ್ದು ಪ್ರದರ್ಶನ

0

ಬಳ್ಳಮಂಜ: ವಿಶ್ವಹಿಂದೂ ಪರಿಷತ್ ಭಜರಂಗದಳ ಮಚ್ಚಿನ ಘಟಕ, ಶ್ರೀ ಅನಂತೇಶ್ವರ ಸ್ವಾಮಿ ಭಜನಾಮಂಡಳಿ ಬಳ್ಳಮಂಜ, ವೀರಕೇಸರಿ ಫ್ರೆಂಡ್ಸ್ (ರಿ) ಬಳ್ಳಮಂಜ, ನ್ಯೂ ಫ್ರೆಂಡ್ಸ್ ಸ್ಫೋರ್ಟ್ಸ್ ಕ್ಲಬ್ ಬಳ್ಳಮಂಜದ ಜಂಟಿ ಆಶ್ರಯದಲ್ಲಿ ಅಯೋಧ್ಯೆಯ ಬಾಲರಾಮನ ಕಾರ್ಯಕ್ರಮವನ್ನು ಭಕ್ತಿಪ್ರಧಾನವಾಗಿ ಆಚರಿಸಲಾಯಿತು.

ಬಳ್ಳಮಂಜ ದೇವಸ್ಥಾನದ ವಠಾರದಲ್ಲಿ ಬೆಳಗ್ಗೆ 8 ರಿಂದ ದೇವತಾ ಕಾರ್ಯ, ನಂತರ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ರಾಮ ದೇವರ ಭಾವಚಿತ್ರವನ್ನು ಭಜನೆಯ ಮೂಲಕ ಬಳ್ಳಮಂಜ ಪೇಟೆಯಾದ್ಯಂತ ಮೆರವಣಿಗೆ ಮಾಡಲಾಯಿತು.

ಸುದ್ದಿ ನ್ಯೂಸ್ ನಲ್ಲಿ ಪ್ರಸಾರವಾಗುತ್ತಿದ್ದ ಬಾಲರಾಮನ ಕಾರ್ಯಕ್ರಮದ ದೃಶ್ಯಗಳನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ರಾಮಭಕ್ತರು ನೋಡಿ ಆನಂದಿಸಿದರು.ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಭಾಗಿಯಾದರು.

ಸಾಯಂಕಾಲ ರಾಮದೀಪೋತ್ಸವ ಹಾಗೂ ಸಿಡಿಮದ್ದು ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.

ಬಳ್ಳಮಂಜದ ದೇವಾಲಯದ ಅನುವಂಶಿಕ ಆಡಳಿತ ಮೋಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ, ಜಯಪ್ರಕಾಶ್ ಸಂಪಿಗೆತ್ತಾಯ, ಪ್ರಾ.ಕೃ.ಪ.ಸ.ಸಂಘ ಮಚ್ಚಿನದ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ವಡ್ಡ, ಗ್ರಾ.ಪಂ.ಸದಸ್ಯ ಚಂದ್ರಶೇಖರ್ ಬಿ.ಎಸ್, ವಿಹೆಚ್ ಪಿ ಬಜರಂಗದಳದ ಪ್ರಮುಖರಾದ ಸತೀಶ್ ಮರಕ್ಕಡ, ವೀರಕೇಸರಿ ಫ್ರೆಂಡ್ಸ್ ಅಧ್ಯಕ್ಷ ಅಶೋಕ್ ನಾವಡ, ನ್ಯೂ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಪ್ರೇಮನಾಥ್ ಗೌಡ, ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here