ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆಯ ಸಂತಸದ ಕ್ಷಣದಲ್ಲಿ ಸದಾಶಿವ ರಾವ್ ಮತ್ತು ಕಾಂಪ್ಲೆಕ್ಸ್ ಸದಸ್ಯರು ಒಟ್ಟು ಸೇರಿ ಕನಸೊಂದು ನನಸಾಗಿದೆ ಎನ್ನುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಕನ್ಯಾಡಿಯ ಭಕ್ತಪ್ರಿಯ ಭಜನಾ ಮಂಡಳಿಯವರು ವತಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಸಲಾಗಿದೆ.
ಕಾರ್ಯಕ್ರಮದಲ್ಲಿ ಕನಸೊಂದು ನನಸಾಗಿದೆ ಎನ್ನುವ ನಾಮದೊಂದಿಗೆ ಸುಂದರ ರಂಗೋಲಿ ಬಿಡಿಸಲಾಗಿದ್ದು, ಎಲ್ಲರ ಮನಗೆದ್ದಿದೆ.ಕಾರ್ಯಕ್ರಮದ ನಂತರ ಎಲ್ಲರಿಗೂ ಸಿಹಿಹಂಚಿ ಸಂಭ್ರಮಿಸಲಾಯಿತು.