ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ಅಯೋದ್ಯೆ ಶ್ರೀ ರಾಮ ಪ್ರಾಣ ಪ್ರತಿಷ್ಠೆ ಅಂಗವಾಗಿ ವಿವಿಧ ಕಾರ್ಯಕ್ರಮ-ಕರಸೇವಕರಿಗೆ ಗೌರವಾರ್ಪಣೆ

0

ಬೆಳಾಲು: ಶ್ರೀ ಮಾಯ ಮಹೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆಯ ದಿನದ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಿತು.

ಬೆಳಿಗ್ಗೆ ಪುಣ್ಯಾಹ, ರಾಮಾತಾರಕ ಯಜ್ಞ ಪೂರ್ಣಆಹುತಿ, ರುದ್ರಾಭಿಷೇಕ ಮಹಾದೇವರಿಗೆ ಸಿಯಾಳ ಅಭಿಷೇಕ,ರುದ್ರ ಪಾರಾಯಣ ವಿಷ್ಣು ಸಹಸ್ರನಾಮ ಪಾರಾಯಣ, ಅಯೋದ್ಯೆಯ ನೇರ ಪ್ರಸಾರ, ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.


ಸನ್ಮಾನ: 1992ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದ್ದ ಬೆಳಾಲಿನ ರಮೇಶ ಗೌಡ ಅಂಗಡಿಬೆಟ್ಟು, ಅಣ್ಣಿ ಪೂಜಾರಿ(ದೇಜಪ್ಪ)ನಾರಾಯಣ ಶೆಟ್ಟಿಗಾರ, ಚಂದ್ರಯ್ಯ ಆಚಾರ್ಯ, ಸುಂದರ ಎಂ.ಕೆ ಇವರನ್ನು ಹಿರಿಯ ಕಾರ್ಯಕರ್ತರಾದ ಅಚ್ಚುತ ಶರ್ಮ, ಸಂಜೀವ ಗೌಡ ಇವರು ಗೌರವಾರ್ಪಣೆ ಮಾಡಿದರು.

ಬಳಿಕ ಬೆಳಾಲು ಶ್ರೀ ಧ.ಮ.ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಧಾರ್ಮಿಕ ಉಪನ್ಯಾಸಗೈದರು.ಬಳಿಕ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here