ನಡ: ಕುತ್ರೊಟ್ಟು ಬಳಿ ದ್ವಿಚಕ್ರ ವಾಹನ ಡಿಕ್ಕಿ: ಮಗು ಗಂಭೀರ

0

ಬೆಳ್ತಂಗಡಿ: ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿ ದ್ವಿಚಕ್ರ ವಾಹನ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ಜ.14 ರಂದು ನಡೆದಿದೆ.

ನಡ ಗ್ರಾಮದ ಹೊಕ್ಕಿಲ ನಿವಾಸಿ ನಿರೀಕ್ಷಾ (8) ಗಾಯಗೊಂಡ ಬಾಲಕಿ.

ನಡ ಗ್ರಾಮದ ಹೊಕ್ಕಿಲ ನಿವಾಸಿ ವೇದಾವತಿ ಅವರು ನೀಡಿದ ದೂರಿನಂತೆ, ಅವರ ಅತ್ತಿಗೆ ನೀಲಾ ಹಾಗೂ ಪತಿಯ ಅಣ್ಣನ ಮಗು ನಿರೀಕ್ಷಾ (8) ಜತೆ ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಿಂದ ಅವರ ಮನೆ ಹೊಕ್ಕಿಲ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವೇಳೆ ಕುತ್ರೊಟ್ಟು ಬಳಿ ದ್ವಿಚಕ್ರ ವಾಹನ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿರೀಕ್ಷಾಳಿಗೆ ಢಿಕ್ಕಿ ಹೊಡೆದಿದ್ದಾನೆ.

ಪರಿಣಾಮ ಅವಳು ಅಲ್ಲಿಯೇ ರಸ್ತೆಗೆ ಬಿದ್ದು ಬಲಬದಿಯ ಹಣೆಗೆ ಗುದ್ದಿದ ರಕ್ತಗಾಯ, ಬಲ ಕಾಲಿನ ಮೊಣಗಂಟಿಗೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here