ಬೆಳಕು ಚಾರಿಟೇಬಲ್ ಟ್ರಸ್ಟ್ ಕೊಳಕೆಯಿಂದ ಸೌಲಭ್ಯ ವಿತರಣೆ

0

ಸುಲ್ಕೇರಿ: ಜ.14ರಂದು ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನವೀನ್ ಪೂಜಾರಿಯವರು ಕಳೆದ 10 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕುಟುಂಬದ ಪರಿಸ್ಥಿತಿಯನ್ನು ಅರ್ಥೈಸಿಕೊಂಡ
ಬೆಳಕು ಚಾರಿಟೇಬಲ್ ಟ್ರಸ್ಟ್(ರಿ.)ಕೊಳಕೆ, ಇರ್ವತ್ತೂರು ಕಾರ್ಕಳ ತಾಲೂಕು ಇದರ ವತಿಯಿಂದ ಬೆಳ್ತಂಗಡಿ ಘಟಕದ 8 ಮಂದಿ ಸದಸ್ಯರ ಸಹಕಾರದಿಂದ ಹಾಗೂ ಟ್ರಸ್ಟ್ ನ ಟ್ರಸ್ಟಿಗಳು ಮತ್ತು ಸರ್ವ ಸದಸ್ಯರ ಆಶೀರ್ವಾದದೊಂದಿಗೆ ನವೀನ್ ಪೂಜಾರಿ ಅವರ ಕುಟುಂಬಕ್ಕೆ 50 Kg ಅಕ್ಕಿಯನ್ನು ವಿತರಿಸಿ, ಶೀಘ್ರ ಗುಣಮುಖರಾಗುವಂತೆ ಭಗವಂತನಲ್ಲಿ ಬೇಡಿಕೊಳ್ಳಲಾಯಿತು.ಹಾಗೂ ಅವರ ತಾಯಿಯಾದ
ಕೂಸಮ್ಮರವರಿಗೂ ನರದ ಸಮಸ್ಯೆಯಿದ್ದು ಈ ಬಗ್ಗೆ ಉಡುಪಿಯ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಹಕಾರಿಯಾಗುವಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರಲ್ಲಿ ಮಾತಾಡಿ ವ್ಯವಸ್ಥೆ ಮಾಡಿ ಕೊಡಲಾಗುವುದ
ಎಂಬ ಭರವಸೆಯ ಮುಖಾಂತರ ಟ್ರಸ್ಟ್ ನ ಸದಸ್ಯರಾದ ಹರಿಣಿ.ಎಲ್ ಪೂಜಾರಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಸುಲ್ಕೇರಿ ಗ್ರಾಮ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷ ನಾರಾಯಣ್ ಪೂಜಾರಿ, ಬೆಳಕು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ವಿಶ್ವನಾಥ ಪೂಜಾರಿ, ಸದಸ್ಯರಾದ ದಿನೇಶ್, ಹಾಗೂ ಸುಲ್ಕೇರಿ ಬಿಲ್ಲವ ಸಂಘದ ಉಪಾಧ್ಯಕ್ಷರಾದ ಶಂಕರ್ ಪೂಜಾರಿ, ನಿರ್ದೇಶಕರಾದ ಕೀರ್ತನ್, ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here