ಪದ್ಮುಂಜ ನೀಲಯ ನಲ್ಕೆ ನಿಧನ

0

ಬೆಳ್ತಂಗಡಿ: ಬೆಳ್ತಂಗಡಿ ಸಿಪಿಐಎಂ ತಾಲೂಕು ಸಮಿತಿ ಸದಸ್ಯೆ, ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ, ದಲಿತ ಹಕ್ಕು ಸಮಿತಿಯ ತಾಲೂಕು ಕಾರ್ಯದರ್ಶಿ ಈಶ್ವರಿ ಶಂಕರ್ ಅವರ ತಂದೆ ನೀಲಯ ನಲ್ಕೆ (70 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜ.14ರಂದು ನಿಧನರಾದರು.

ಮೃತರು ಪದ್ಮುಂಜದ ವೆಂಕಪ್ಪ ಪಂಡಿತರ ಸಹೋದರರಾಗಿದ್ದು, ಹೆಣ್ಣು ಮಕ್ಕಳಾದ ಪ್ರೇಮ, ಈಶ್ವರಿ, ಕವಿತ, ನಮಿತ, ವನಿತ ಹಾಗೂ ಗಂಡು ಮಕ್ಕಳಾದ ಕೇಶವ ಮತ್ತು ಅನಂತ ಕೃಷ್ಣ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here