ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು

0

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಇವರ ಅಧ್ಯಕ್ಷತೆಯಲ್ಲಿ ಜ.13ರಂದು ಸಂಘದ ಸಭಾ ಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷರಾಗಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ್ ಕಲ್ಲಾಪು ಆಯ್ಕೆಯಾದರು.ಉಪಾಧ್ಯಕ್ಷರಾಗಿ ಶಿಶು ಅಭಿವೃದ್ಧಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಸುಂದರ ಪೂಜಾರಿ, 21 ಮಂದಿ ನಿರ್ದೇಶಕರು 5 ಮಂದಿ ನಾಮ ನಿರ್ದೇಶಕರು ಆಯ್ಕೆಯಾದರು.

ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಎಂ.ಕೆ.ಪ್ರಸಾದ್ ಶಿರ್ಲಾಲು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆಯಾಗಿ ಸುಮತಿ ಪ್ರಮೋದ್ ಆಯ್ಕೆಯಾದರು.ಗೌರವ ಅಧ್ಯಕ್ಷ ಮಾಜಿ ಶಾಸಕ ಕೆ.ವಸಂತ ಬಂಗೇರ ಘೋಷಣೆ ಮಾಡಿದರು.ಚುನಾವಣಾಧಿಕಾರಿಯಾಗಿ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಶ್ವಥ್ ಕುಮಾರ್ ಪ್ರಕ್ರಿಯೆ ನಡೆಸಿದರು.

ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸದಸ್ಯರು ಹಾಜರಿದ್ದರು.

ನೂತನ ನಿರ್ದೇಶಕರುಗಳಾಗಿ ವಿಶ್ವನಾಥ ಕೋಟ್ಯಾನ್ ಗುಂಡೂರಿ, ನಾರಾಯಣ ಪೂಜಾರಿ ಉಚ್ಚುರು, ಪ್ರಶಾಂತ್ ಕೊಕ್ರಾಡಿ, ನಿತೀಶ್ ಎಚ್.ಕುಕ್ಕೆಡಿ, ರವೀಂದ್ರ ಬಿ.ಅಮೀನ್ ಬಳಂಜ, ಸಂಜೀವ ಪೂಜಾರಿ ಕೊಡಂಗೆ, ಜಯ ಕುಮಾರ್ ನಡ, ಗುರುರಾಜ ಗುರಿಪಳ್ಳ, ಚಂದ್ರಶೇಖರ ಪೂಜಾರಿ ಇಂದಬೆಟ್ಟು, ನಮಿತಾ ತೋಟತ್ತಾಡಿ, ಸಂತೋಷ ಕೆ.ಸಿ., ಸುನೀಲ್ ಕನ್ಯಾಡಿ, ಸಂತೋಷ ಉಪ್ಪಾರು ಬೆಳಾಲು, ರೂಪೇಶ್ ಧರ್ಮಸ್ಥಳ, ವಿನೋದಿನಿ ರಾಮಪ್ಪ, ಪ್ರಮೋದ್ ಮಚ್ಚಿನ, ಅನೂಪ್ ಬಂಗೇರ, ಉಷಾ ಶರತ್, ಕರುಣಾಕರ ರೆಂಕೆದಗುತ್ತು, ನಾಮ ನಿರ್ದೇಶಕ ನಿರ್ದೇಶಕರುಗಳಾಗಿ ಗುಣಕರ ಅಗ್ನಾಡಿ, ಹರಿದಾಸ್ ಕೇದೆ, ಕಮಲಾಕ್ಷ ಬೆಳ್ತಂಗಡಿ, ತರುಷ್ ಹೇರಾಜೆ, ರಾಜಶ್ರೀ ರಮಣ್ ಆಯ್ಕೆಯಾದರು.

LEAVE A REPLY

Please enter your comment!
Please enter your name here