ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ

0

ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಜ.12ರಂದು ದೇಶಭಕ್ತ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಜೆಸಿಐ ಭವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಯೋಜಿಸಿದ್ದರು.

ಘಟಕ ಪೂರ್ವಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ವೇದಿಕೆ ಆವಾಹನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು, ಅನನ್ಯ ಜೈನ್ ಜೇಸಿ ವಾಣಿ ವಾಚಿಸಿದರು. ಜೆ.ಸಿ.ಐ ಬೆಳ್ತಂಗಡಿ ಅಧ್ಯಕ್ಷ ಜೇಸಿ ಹೆಚ್.ಜಿ.ಎಫ್ ರಂಜಿತ್ ಎಚ್.ಡಿ. ಸll ಅಧ್ಯಕ್ಷತೆ ವಹಿಸಿದ್ದರು.ದೀಕ್ಷಾ ಗಣೇಶ್ ಮತ್ತು ಜೆಸಿ ಭರತ್ ಅತಿಥಿಗಳನ್ನು ಪರಿಚಯಿಸಿದರು.

ಮುಖ್ಯ ಅತಿಥಿಗಳಾಗಿ ಬಳಂಜ ಶಾಲಾಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮನೋಹರ ಬಳಂಜ ಭಾಗವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ನ್ಯಾಯವಾದಿ ಅನಿಲ್ ಕುಮಾರ್ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಮಹತ್ವದ ಕುರಿತು ಮಾತನಾಡಿದರು.ಭಾರತವನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಸವಾಲನ್ನು ಸ್ವೀಕರಿಸಲು ಅವರು ಪ್ರಸ್ತುತ ಯುವಜನರನ್ನು ಒತ್ತಾಯಿಸಿದರು.

ವಲಯ 15 ರ ಉಪಾಧ್ಯಕ್ಷ ಜೆ.ಎಫ್.ಎಮ್ ಶಂಕರ್ ರಾವ್ ಆಗಮಿಸಿದ್ದರು.

ವೇದಿಕೆಯಲ್ಲಿ ಮಹಿಳಾ ಜೇಸಿ ಸಂಯೋಜಕಿ ಶ್ರುತಿ ರಂಜಿತ್, ಯುವ ಜೆಸಿ ಅಧ್ಯಕ್ಷ ಜೆಜೆಸಿ ಸಮನ್ವಿತ್ ಭಾಗವಹಿದರು.

ಜೆಸಿಐ ಬೆಳ್ತಂಗಡಿಯ ಕಾರ್ಯದರ್ಶಿ ಮಂಜುಶ್ರೀ, ಜೆಸಿ ಅನುದೀಪ್ ಜೈನ್ ವಂದಿಸಿದರು.ಪೂರ್ವಧ್ಯಕ್ಷರಾದ ಜೆಸಿ ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ತುಕಾರಾಮ್, ಸಂತೋಷ್ ಪಿ.ಕೋಟ್ಯಾನ್, ಅಭಿನಂದನ್ ಹರೀಶ್ ಕುಮಾರ್ ಹಾಗೂ ಉಪಾಧ್ಯಕ್ಷರುಗಳಾದ ಸುಧೀರ್ ಕೆ.ಎನ್, ಶೈಲೇಶ್, ಚಂದ್ರಹಾಸ್, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here