ಬೆಳ್ತಂಗಡಿ ಠಾಣಾ ಪಿಎಸ್ಐ ಧನರಾಜ್, ಪುಂಜಾಲಕಟ್ಟೆ ಠಾಣೆಯ ಪಿಎಸ್ಐ ಓಡಿಯಪ್ಪ ವರ್ಗಾವಣೆ

0

ಬೆಳ್ತಂಗಡಿ: ಪಶ್ಚಿಮ ವಲಯದ ಒಟ್ಟು 20 ಮಂದಿ ಪೊಲೀಸ್ ಪಿಎಸ್‌ಐ ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಉಪ ಮಹಾ ನಿರೀಕ್ಷಕರು ಅಮಿತ್ ಸಿಂಗ್ ಜ.9 ರಂದು ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಠಾಣೆಯ ಪಿಎಸ್‌ಐ -1 ಆಗಿದ್ದ ಧನರಾಜ್ ಟಿ.ಎಂ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್‌ ಠಾಣೆಗೆ ಪಿಎಸ್‌ಐ-2 ಆಗಿ ವರ್ಗಾವಣೆ ಮಾಡಿ, ಬೆಳ್ತಂಗಡಿ ಪೊಲೀಸ್ ಠಾಣೆಗೆ ಪಿಎಸ್‌ಐ-1 ಆಗಿ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್‌ಐ -2 ಆಗಿದ್ದ ಮುರಳೀಧರ ನಾಯ್ಕ್ ಅವರನ್ನು ನೇಮಕ ಮಾಡಲಾಗಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ -2 ಆಗಿದ್ದ ಓಡಿಯಪ್ಪ ಗೌಡರನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ-2 ಆಗಿ ವರ್ಗಾವಣೆ ಮಾಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ -1 ಆಗಿದ್ದ ಎನ್.ಕೆ.ಓಮನ ಅವರನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ-2 ಆಗಿ ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here