ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾಗಿ ಲಕ್ಷ್ಮಣ ಉಪ್ಪಾರ ಕರ್ತವ್ಯಕ್ಕೆ ಹಾಜರು

0

ಬೆಳ್ತಂಗಡಿ: ಬೆಳ್ತಂಗಡಿ ಅಬಕಾರಿ ಇಲಾಖೆಯ ವಲಯ ಕಚೇರಿಯ ಅಬಕಾರಿ ನಿರೀಕ್ಷಕರಾಗಿ ಲಕ್ಷ್ಮಣ ಉಪ್ಪಾರ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಅಬಕಾರಿ ಉಪ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಇವರು ಅಬಕಾರಿ ನಿರೀಕ್ಷಕರಾಗಿ ಪದನ್ನೋತಿಗೊಂಡು ಬೆಳ್ತಂಗಡಿ ಅಬಕಾರಿ ಇಲಾಖೆಗೆ ವರ್ಗಾವಣೆಯಾಗಿ ಆಗಮಿಸಿದ್ದಾರೆ.

ಅನೇಕ ಗಾಂಜ ಮತ್ತು ಲಿಕ್ಕರ್ ಪ್ರಕರಣವನ್ನು ಪತ್ತೆ ಹಚ್ಚಿರುವ ಇವರು ಬೆಳಗಲಿಯಲ್ಲಿ ಸಂಚಲನ ಸೃಷ್ಠಿಸಿದ್ದ 140 ಕೆ.ಜಿ. ಗಾಂಜಾ ಪ್ರಕರಣದ ತನಿಖಾಧಿಕಾರಿಯಾಗಿದ್ದರು.

ಅಬಕಾರಿ ನಿರೀಕ್ಷಕರಾಗಿದ್ದ ಸೌಮ್ಯಲತಾ ಎನ್. ಅವರು ಪದೋನ್ನತಿಗೊಂಡು ಮಂಗಳೂರು ಉಪವಿಭಾಗ 2ರ ಡಿವೈಎಸ್‌ಪಿಯಾಗಿ ವರ್ಗಾವಣೆಯಾದ ಬಳಿಕ ಪ್ರಭಾರ ಅಬಕಾರಿ ನಿರೀಕ್ಷಕರಾಗಿ ಸಯ್ಯದ್ ಶಬೀರ್ ಕಾರ್ಯನಿರ್ವಹಿಸಿದ್ದರು.

ಇದೀಗ ಅಬಕಾರಿ ನಿರೀಕ್ಷಕರಾಗಿ ಲಕ್ಷ್ಮಣ ಉಪ್ಪಾರ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಇಲ್ಲಿನ 27ನೇ ಅಬಕಾರಿ ನಿರೀಕ್ಷಕರಾಗಿದ್ದಾರೆ.

LEAVE A REPLY

Please enter your comment!
Please enter your name here