ಬೆಳ್ತಂಗಡಿಯಲ್ಲಿ ನಾಯಿ, ಬೆಕ್ಕುಗಳ ದತ್ತು ಸ್ವೀಕಾರ

0

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ಎನಿಮಲ್ ಕ್ಯಾರ್ ಟ್ರಸ್ಟ್ ಮಂಗಳೂರು, ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ ಹಾಗೂ ಪಟ್ಟಣ ಪಂಚಾಯತ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ದೇಸಿ ತಳಿಗಳ ನಾಯಿ ಹಾಗೂ ಬೆಕ್ಕಿನ ಮರಿಗಳ ಉಚಿತ ದತ್ತುಕೊಡುವ ಕಾರ್ಯಕ್ರಮ ಬೆಳ್ತಂಗಡಿಯಲ್ಲಿ ನಡೆಯಿತು.

ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ, ಕಾರ್ಯದರ್ಶಿ ಮಾಧವ ಗೌಡ, ಸದಸ್ಯರಾದ ಶ್ರೀಶ ಮುಚ್ಚಿನ್ನಾಯ, ರಮಾನಂದ ಹಾಗೂ ರೋಟರಿ ಕ್ಲಬ್ ನ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿ ವಿದ್ಯಾಕುಮಾರ್, ಯಶವಂತ ಪಟವರ್ಧನ್, ಉಮಾ ರಂಜನ್ ರಾವ್, ರೊ.ನಾರಾಯಣ ಪೈ, ನಾರಾಯಣ ಭಟ್ ಮುಂತಾದವರು ಪಾಲ್ಗೊಂಡಿದ್ದರು.

ಈ‌ ಕಾರ್ಯಕ್ರಮದಲ್ಲಿ 51 ನಾಯಿ ಮರಿಗಳು ಹಾಗೂ 32 ಬೆಕ್ಕಿನ ಮರಿಗಳನ್ನು ದತ್ತು ನೀಡಲಾಯಿತು.

LEAVE A REPLY

Please enter your comment!
Please enter your name here