ಸುದ್ದಿ ವರದಿಯ ಬೆನ್ನಲ್ಲೇ ವಾರಸುದಾರರ ಕೈ ಸೇರಿದ ಹಣ-ಪ್ರಾಮಾಣಿಕತೆ ಮೆರೆದ ಸುಂದರ್ ಶೆಟ್ಟಿ

0

ಬೆಳ್ತಂಗಡಿ: ಇಲ್ಲಿನ ಲಾಯಿಲದಲ್ಲಿ ಬಿದ್ದು ಸಿಕ್ಕಿರುವ ಹಣದ ಕಂತೆ ವಾರಸುದಾರರ ಕೈ ಸೇರಿದೆ.ಲಾಯಿಲ ಎ.ಬಿ ಸ್ಟೋರ್ ನಲ್ಲಿ ಉದ್ಯೋಗಿಯಾಗಿರುವ ಸುಂದರ್ ಶೆಟ್ಟಿ ಉಜಿರೆ ಎಂಬವರು ತನಗೆ ಸಿಕ್ಕಿರುವ ಹಣದ ಕಂತೆಯ ಬಗ್ಗೆ ಸುದ್ದಿಬಿಡುಗಡೆಗೆ ಮಾಹಿತಿ ನೀಡಿದರು.

ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್ ನಲ್ಲಿ ಹಣದ ಕಂತೆ ಸಿಕ್ಕಿರುವ ಬಗ್ಗೆ ನ್ಯೂಸ್ ಪ್ರಸಾರ ಮಾಡಲಾಯಿತು.ಅಲ್ಲದೇ, ಹಣ ಎಲ್ಲಿದೆ ಅನ್ನುವುದನ್ನು ಕೂಡ ತಿಳಿಸಲಾಯಿತು.ಇದಾದ ನಂತರ ಗುರಿಪಳ್ಳ ಏನೀರುಪಲ್ಕೆ ನಿವಾಸಿ ನೋಣಯ್ಯ ಗೌಡ ಎಂಬವರು ಬ್ಯಾಂಕ್ ನಿಂದ ಡ್ರಾ ಮಾಡಿರುವ ಹಣವನ್ನು ಆಟೋದಲ್ಲಿ ಹೋಗುವಾಗ ಕಳೆದುಕೊಂಡಿದ್ದರು.

ಸುದ್ದಿ ನ್ಯೂಸ್ ನ ವರದಿ ನೋಡಿದ ಬೆನ್ನಲ್ಲೇ ವಾರಸುದಾರರು ಸುದ್ದಿ ಕಚೇರಿಗೆ ಆಗಮಿಸಿದರು. ನಂತರ ಹಣದ ಕಂತೆ ಪಡೆದಿದ್ದ ಸುಂದರ್ ಶೆಟ್ಟಿಯವರು ಕೂಡ ಕಚೇರಿಗೆ ಆಗಮಿಸಿ, ಸರಿಯಾದ ಗುರುತು, ಎಷ್ಟು ನೋಟ್ ಇದೆ, ಯಾವ ಮೌಲ್ಯದ ನೋಟ್ ಎಂಬುದನ್ನು ವಿಚಾರಿಸಿದರು. ಜೊತೆಗೆ ಯಾವ ಬ್ಯಾಂಕ್ ನ ಸ್ಟಿಕ್ಕರ್ ಇದೆ ಅನ್ನುವುದನ್ನು ತಿಳಿಸಿದ ನಂತರ ವಾರಸುದಾರರಿಗೆ ಹಣವನ್ನು ನೀಡಲಾಯಿತು.

ಹಿಂದಿರುಗಿಸಿದವರ ಪ್ರಾಮಾಣಿಕತೆಯನ್ನು ಮೆಚ್ಚಿ ವಾರಸುದಾರ ನೋಣಯ್ಯ ಗೌಡ ರವರು ರೂ.5 ಸಾವಿರ ಹಣವನ್ನು ಗೌರವ ಧನವಾಗಿ ನೀಡಿದರು.

LEAVE A REPLY

Please enter your comment!
Please enter your name here