ಶಿವಮಾಣಿಕ್ಯ ತಂಡದಿಂದ ಧನಸಹಾಯ ಹಸ್ತಾಂತರ

0

ಬೆಳ್ತಂಗಡಿ: ಶಿವಮಾಣಿಕ್ಯ ತಂಡದ ಮೂವತ್ತನೆಯ ಯೋಜನೆಯ ಫಲಾನುಭವಿಗಳಾದ ಮಡಂತ್ಯಾರು ನಿವಾಸಿ ಸುರೇಶ ಹಾಗೂ ತುಳಸಿ ದಂಪತಿಗಳ ಪುತ್ರ ಹರ್ಷಲ್ ಕೆ. ಎಂಬವರಾಗಿದ್ದು, ಇವರು ಹುಟ್ಟಿನಿಂದಲೇ ಮೆದುಳಿನ ನರದ ಸಮಸ್ಯೆಯಿಂದ ಬಳಲುತಿದ್ದು, ಯಾವುದೇ ಚಟುವಟಿಕೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.

ಶಸ್ತ್ರಚಿಕಿತ್ಸೆಗೆ 15 ಲಕ್ಷದವರೆಗೆ ವೆಚ್ಚದ ಅಂದಾಜು ಇದ್ದು, ಪೂರೈಸಲು ಆಶಕ್ತರಿರುತ್ತಾರೆ.ಇವರ ಆರ್ಥಿಕ ಸಂಕಷ್ಟವನ್ನು ಮನಗಂಡು, ಶಿವಮಾಣಿಕ್ಯ ತಂಡದಿಂದ ಸಂಗ್ರಹಿಸಲಾದ ಮೊತ್ತ 10,000 ರೂ.ಗಳನ್ನು ಡಿ.29ರಂದು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here