ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

0

ರೆಖ್ಯ: ವಿಶ್ವ ಹಿಂದೂ ಪರಿಷತ್, ಬಜರಂಗದಳ ರೆಖ್ಯ ಘಟಕ ನೇತೃತ್ವದಲ್ಲಿ ಡಿ.30 ರಂದು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ರೆಖ್ಯದಲ್ಲಿ 3ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಸುಳ್ಯ ಇವರ ಪೌರೋಹಿತ್ಯದಲ್ಲಿ‌ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಹಿಂ.ಪ.ಬಜರಂಗದಳ ರೆಖ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಕೆಲೆಂಜಿನೋಡಿ ವಹಿಸಿದ್ದರು.ಧಾರ್ಮಿಕ ಭಾಷಣಕಾರರಾಗಿ ಸಹ ಸಂಯೋಜಕರು ವಿ.ಹಿಂ.ಪ.ಬಜರಂಗದಳ ದಕ್ಷಿಣ ಮುರಳಿಕೃಷ್ಣ ಹಸಂತಡ್ಕ ಆಗಮಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜ, ರಾಜ್ಯ ಕಾರ್ಯಕಾರಣಿ ಸದಸ್ಯರು ವಿ.ಹಿಂ.ಪ.‌ಬಜರಂಗದಳ ಕರ್ನಾಟಕ ರಘು ಸಕಲೇಶಪುರ, ಜಿಲ್ಲಾ ಕಾರ್ಯದರ್ಶಿಗಳು ವಿ.ಹಿಂ.ಪ.ಬಜರಂಗದಳ ಪುತ್ತೂರು ಜಿಲ್ಲೆ ನವೀನ್‌ ನೆರಿಯ, ಶ್ರೀ ದುರ್ಗಾಪರಮೇಶ್ವರಿ ಭಜನಾ‌ ಮಂದಿರ ರೆಖ್ಯ ಅಧ್ಯಕ್ಷ ಗಿರಿಯಪ್ಪ ಬಂಗೇರ, ಪುತ್ತೂರು ವಿ.ಹಿಂ.ಪ. ಬಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀದರ್ ತೆಂಕಿಲ, ವಿ.ಹಿಂ.ಪ. ಬಜರಂಗದಳ ಪುತ್ತೂರು ನಗರ ಸಂಯೋಜಕರು ಜಯಂತ್ ಕುಂಜೂರ್ಪಂಜ, ಪುತ್ತೂರು ಬಜರಂಗದಳ ಪ್ರಮುಖರು ಕೇಶವ ಪ್ರಸಾದ್ ಹಾಗೂ ಊರ-ಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

ಅಖಿಲ್ ರೆಖ್ಯ ಸತ್ಸಂಗ ಪ್ರಮುಖ್ ವಿ.ಹಿಂ.ಪ. ಬಜರಂಗದಳ ಬೆಳ್ತಂಗಡಿ ಪ್ರಖಂಡ ಇವರು ಕಾರ್ಯಕ್ರಮವನ್ನು ಸ್ವಾಗತಿಸಿದರು.ಯಶೋಧರ ಗೌಡ ಕೋಟಿಮಾರ್ ಕಾರ್ಯಕ್ರಮ ನಿರೂಪಿಸಿದರು.ಪ್ರದೀಪ್ ಸಂಪಿಗೆತ್ತಡಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here