ಬೆಳ್ತಂಗಡಿ: ಪೃಥ್ವಿ ಜ್ಯುವೆಲ್ಲರ್ಸ್ ನಲ್ಲಿ ರೈತ ದಿನಾಚರಣೆ

0

ಬೆಳ್ತಂಗಡಿ: ಪೃಥ್ವಿ ಜ್ಯುವೆಲ್ಲರ್ಸ್ ನಲ್ಲಿ ಡಿ.30ರಂದು ರೈತ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ 7 ಜನ ರೈತರು ಆಗಮಿಸಿದ್ದರು.ತೋಟಗಾರಿಕೆ ಘಟಕದಡಿ ಆದ್ಯತೆ ನೀಡಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದವರು, ಯಾಂತ್ರೀಕೃತ ಕೃಷಿ ಘಟಕದಡಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದವರು, ಪಶು ಸಂಗೋಪನೆ ಘಟಕದಡಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದವರು, ಹೈನುಗಾರಿಕೆ ಘಟಕದಡಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದವರು, ಸಮಗ್ರ ಕೃಷಿ ಪದ್ಧತಿ ಘಟಕದಡಿ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದವರು.ಹೀಗೆ ಕೃಷಿಯ ನಾನಾ ಕ್ಷೇತ್ರಗಳಲ್ಲಿ ಪ್ರಶಸ್ತಿ ಪಡೆದಂತಹ ಬೆಳ್ತಂಗಡಿ ತಾಲೂಕಿನ ಕೃಷಿ ಕ್ಷೇತ್ರದ ಸಾಧಕರಿಗೆ ಆಹ್ವಾನಿಸಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಬೆಳ್ತಂಗಡಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಆದಂತಹ ರಂಜಿತ್ ಕುಮಾರ್ ರವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷಿಕರನ್ನು ಸನ್ಮಾನಿಸಿದರು.ರಂಜಿತ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಪೃಥ್ವಿ ಜುವೆಲ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಶ್ಲಾಘನೆ ಮಾಡಿದರು.

ಜಗದೀಶ್ ಪ್ರಸಾದ್ ರವರು ಸಿವಿಲ್ ಎಂಜಿನಿಯರಿಂಗ್ ಮುಗಿಸಿ ಉದ್ಯೋಗದಲ್ಲಿ ಇದ್ದರೂ ಸಹ ಅದರ ಜೊತೆ ಯಾಂತ್ರೀಕೃತ ಕೃಷಿ ಯಲ್ಲಿ ಸಾಧಕರಾದ ಅನುಭವವನ್ನು ಹಂಚಿಕೊಂಡರು.ಚಂದ್ರಶೇಖರ್ ರವರು ಶಾಲಾ ಆಡಳಿತ ಅಧಿಕಾರಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಹೈನುಗಾರಿಕೆಯಲ್ಲಿ ಸಾಧಕರಾದ ಅನುಭವ ಹಂಚಿಕೊಂಡರು.ಯುವ ಪೀಳಿಗೆ ಕೃಷಿಯತ್ತ ಹೆಚ್ಚು ಗಮನ ಹರಿಸಲು ಸಂದೇಶ ನೀಡಿದರು.ನಿಸಾರ್ ರವರು ಆಗಮಿಸಿ ಉತ್ತಮ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here