ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಾರಾಯಣ್ ನಾಯ್ಕ್ ನಿವೃತ್ತಿ

0

ಬೆಳ್ತಂಗಡಿ: ತಾಲೂಕು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನಾರಾಯಣ್ ನಾಯ್ಕ್ ಅವರು ಡಿ.30ರಂದು ನಿವೃತ್ತಿಗೊಂಡಿದ್ದಾರೆ.ಅವರು 1964 ಜ.1ರಂದು ಹರಿಯಪ್ಪ ನಾಯ್ಕ್ ಮತ್ತು ನೀಲಮ್ಮ ದಂಪತಿಗಳು ಪುತ್ರರಾಗಿ ಮಂಚಿ ಗ್ರಾಮದಲ್ಲಿ ಜನಿಸಿದರು.

1988ರಲ್ಲಿ ಮೂಡಬಿದ್ರೆಯ ಸರ್ಕಾರಿ ಪ್ರೌಢಶಾಲೆ ನೆಲ್ಲಿಕಾರುವಿನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯಕ್ಕೆ ಹಾಜರಾದರು.ಬಳಿಕ 2010ರಲ್ಲಿ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, 2014 ರಲ್ಲಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡು ಇದೀಗ ನಿವೃತ್ತಿಗೊಂಡಿದ್ದಾರೆ.

ಪ್ರಸ್ತುತ ಕೊಲ್ಪೆದಬೈಲುವಿನ ಮಾಲಾಡಿಪಲ್ಕೆ ಎಂಬಲ್ಲಿ ಪತ್ನಿ ಮಾಲಾಡಿ ಗ್ರಾ.ಪಂ.ಸದಸ್ಯೆ ಜಯಂತಿ, ಪುತ್ರಿ ಕಾವ್ಯ ಅವರು ಮಣಿಪಾಲ ಉದಯವಾಣಿ ಪತ್ರಿಕೆಯ ವೈಬ್ ಸೈಟ್ ವಿಭಾಗದಲ್ಲಿ ಹಾಗೂ ಪುತ್ರ ಕಾರ್ತಿಕ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here