ಗಮಕ ಜಿಲ್ಲಾಧ್ಯಕ್ಷರಾಗಿ ಮೋಹನ ಕಲ್ಲೂರಾಯ ಮರುನೇಮಕ

0

ಬೆಳ್ತಂಗಡಿ: ಕರ್ನಾಟಕ ಗಮಕ ಕಲಾ ಪರಿಷತ್(ರಿ) ಬೆಂಗಳೂರು, ಕೇಂದ್ರ ಕಛೇರಿಯ ಅಧ್ಯಕ್ಷರಾಗಿರುವ ಡಾಕ್ಟರ್ ಎ.ವಿ.ಪ್ರಸನ್ನ ಅವರು ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ಅವರನ್ನು ಮುಂದಿನ ಮೂರು ವರ್ಷಕ್ಕೆ ದ.ಕ.ಜಿಲ್ಲೆಯ ಕರ್ನಾಟಕ ಗಮಕ ಕಲಾ ಪರಿಷತ್ ಇದರ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಿರುತ್ತಾರೆ.

ಮೋಹನ ಕಲ್ಲೂರಾಯ ಅವರು ಬೆಂಗಳೂರು, ಕುಂದಾಪುರ, ಮೂಡುಬಿದರೆ, ರಾಮ ಕುಂಜ ಇಲ್ಲಿನ ಪದವಿ ಮಹಾವಿದ್ಯಾಲಯಗಳಲ್ಲಿ ಒಟ್ಟು ಸುಮಾರು ನಲ್ವತ್ತು ವರ್ಷಗಳ ಕಾಲ ಕನ್ನಡ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ.

ಅತ್ಯುತ್ತಮ ಸಂಘಟಕರಾಗಿ, ಗಮಕಿಗಳಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ ಅವರು ತನ್ನ ಸಾಹಿತ್ಯ ಸೇವೆ ಮುಂದುವರಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here